Advertisement

ಕ್ರೀಡೆಗಳಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ವೃದ್ಧಿ

11:21 AM Aug 29, 2019 | Naveen |

ನಾರಾಯಣಪುರ: ಹೊರಾಂಗಣ ಕ್ರೀಡೆಗಳು ಶಾಲಾ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾಗಿದ್ದು, ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯ ಉತ್ತಮ ಪಡಿಸಿಕೊಳ್ಳಬೇಕು ಎಂದು ಆರ್‌ಟಿಜೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹನುಮಂತ ನಾಯಕ ಹೇಳಿದರು.

Advertisement

ಕೊಡೇಕಲ್ ಪಟ್ಟಣದ ಯುಕೆಪಿ ಕ್ಯಾಂಪ್‌ ಬಳಿಯ ಕ್ರೀಡಾಗಂಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆರ್‌ಟಿಜೆ ಶಿಕ್ಷಣ ಸಂಸ್ಥೆ ಸಹಭಾಗಿತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಕೊಡೇಕಲ್ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ಕ್ರೀಡೆಗಳಲ್ಲಿ ಸೋಲು-ಗೆಲುವು ಸಮನಾಗಿ ಸ್ವೀಕರಿಸುವ ಮನೋಭಾವ ಮಕ್ಕಳು ಬೆಳಸಿಕೊಳ್ಳಬೇಕು.ತೀರ್ಪುಗಾರರು ಪಾರದರ್ಶಕ ತೀರ್ಪನ್ನು ನೀಡುವ ಮೂಲಕ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಸುರಪುರ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಬಿ.ಆರ್‌. ಪೊಲೀಸ್‌ ಪಾಟೀಲ ಮಾತನಾಡಿ, ಹೆಚ್ಚಿನ ಕ್ರೀಡಾ ಪ್ರತಿಭೆಗಳು ಗ್ರಾಮೀಣ ಭಾಗದಿಂದ ರಾಷ್ಟ್ರ ಮಟ್ಟದವರೆಗೂ ಬೆಳಕಿಗೆ ಬರುತ್ತಿದ್ದಾರೆ. ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಲೇಬೇಕು ಎಂದರು.

ಸಸಿಗೆ ನಿರೇಯುವ ಮೂಲಕ ಚಾಲನೆಗೊಂಡ ಕ್ರೀಡಾಕೂಟದಲ್ಲಿ ಸ್ಥಳೀಯ ರಾಜ ಮನೆತನದ ರಾಜಾ ಜೀತೇಂದ್ರ ನಾಯಕ ಜಹಾಗೀರದಾರ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಬಬಲುಗೌಡ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ದೈಹಿಕ ಶಿಕ್ಷಕ ಬಸವರಾಜ ಮಂಟೆ ನಡೆಸಿಕೊಟ್ಟ ಆಕರ್ಷಕ ಪಥಸಂಚಲನ ಗಮನ ಸೆಳೆಯಿತು. ಬಸನಗೌಡ ಬಿರಾದಾರ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.

Advertisement

ಸಂಗಣ್ಣ ಮಹಲಿನಮಠ ಸಾನ್ನಿಧ್ಯ, ನೀಲಕಂಠಸ್ವಾಮಿ ವಿರಕ್ತಮಠ ನೇತೃತ್ವ ವಹಿಸಿದ್ದರು. ರಂಗನಾಥ ದೊರೆ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಎನ್‌.ಡಿ. ನಾಯಕ, ತಾಪಂ ಸದಸ್ಯ ಮೋಹನ ಪಾಟೀಲ, ಗ್ರಾಪಂ ಅಧ್ಯಕ್ಷೆ ಅಯ್ಯಮ್ಮ ಹೊಳೆಪ್ಪ ಮ್ಯಾಗೇರಿ, ಡಾ| ಬಿ.ಎಂ. ಹಳ್ಳಿಕೋಟೆ, ದವಲಸಾಬ ಕಮತಗಿ, ಎನ್‌ಜಿಒ ಅಧ್ಯಕ್ಷ ಸಂಜೀವ ದರಬಾರೆ, ಪ್ರದೀಪ ಬೀಸೆ, ವೀರಸಂಗಪ್ಪ ಅಂಬಲಿಹಾಳ, ಸೋಮಲಿಂಗಪ್ಪ ದೊರೆ, ಬಾಲಾಜಿ, ತಿರುಪತಿ ಚವ್ವಾಣ, ಶಿವಲಿಂಗಪ್ಪ, ಅಮರಣ್ಣ ಹುಡೇದ, ದೇವು ಗೋಪಾಳೆ, ಮಲ್ಲು ನವಲಗುಡ್ಡ, ಸಂಗಣ್ಣ ಹುಬ್ಬಳ್ಳಿ, ಗೌಡಪ್ಪಗೌಡ, ಇಸಿಒ ಯಮನಪ್ಪ, ಬಿಆರ್‌ಪಿ ಗುರು ರಾಠೊಡ, ಬಸವಂತಭಟ್ ಜ್ಯೋಶಿ, ಬಸವರಾಜ ಜೀರಾಳ, ಬಸನಗೌಡ ಪೊಲೀಸ್‌ ಪಾಟೀಲ, ಚಂದ್ರಶೇಖರ ಹೊಕ್ರಾಣಿ, ಭೀಮಣ್ಣ ಕಲ್ಯಾಣಿ, ಭೀಮನಗೌಡ ಬಿರಾದಾರ, ಶರಣಪ್ಪ ಹೂಗಾರ, ವೀರಣ್ಣಗೌಡ ಸೇರಿದಂತೆ ವಲಯದ ಏಳು ಕ್ಲಸ್ಟರ್‌ಗಳ ಸಿಆರ್‌ಪಿಗಳು, ಮುಖ್ಯ ಗುರುಗಳು, ದೈಹಿಕ ಶಿಕ್ಷಕರು ಪಾಲ್ಗೊಂಡಿದ್ದರು.

ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ನಾಗನಗೌಡ ಸ್ವಾಗತಿಸಿದರು. ಕೋರಿಸಂಗಯ್ಯ ಗಡ್ಡದ್‌ ನಿರೂಪಿಸಿದರು. ಭೀಮರಾಯ ಐಕೂರು ವಂದಿಸಿದರು.

ಪ್ರಾಥಮಿಕ ವಿಭಾಗದ ಮಕ್ಕಳಿಂದ ಖೋ ಖೋ, ಕಬಡ್ಡಿ, ಥ್ರೋಬಾಲ್, ವಾಲಿಬಾಲ್, ಶಟಲ್ ಬ್ಯಾಡ್ಮಿಂಟನ್‌, ಬಾಲ್ ಬ್ಯಾಡ್ಮಿಂಟನ್‌ ಸೇರಿದಂತೆ ನಾನಾ ಮಾದರಿ ಆಟೋಟಗಳು ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next