Advertisement
ಬುಧವಾರ ಜಿಲ್ಲಾಡಳಿತ, ಜಿ.ಪಂ. ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾ ಖೆಯ ಸಹಯೋಗದಲ್ಲಿ ಬನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಗುರುಜಯಂತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು. ರಾಜ್ಯ ಸರಕಾರ ನಾರಾಯಣ ಗುರು ಗಳು ತಣ್ತೀಗಳ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಶೋಷಿತರು ಮತ್ತು ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಹಿಂದುಳಿದ ವರ್ಗ ಗಳ ಇಲಾಖೆಯ ಮೂಲಕ ಎಲ್ಲ ಸಮಾಜಗಳ ಸಮುದಾಯ ಭವನಗಳ ನಿರ್ಮಾಣಕ್ಕೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕಡೆಕಾರು, ಮಲ್ಪೆ, ಹಾವಂಜೆ, ಹೂಡೆ, ಅಂಬಲಪಾಡಿ ಸಹಿತ ಹಲವು ಕಡೆಗಳಲ್ಲಿ ನಾರಾಯಣ ಗುರು, ಮೊಗವೀರ, ಕುಡುಬಿ, ಕುಲಾಲ, ವಿಶ್ವಕರ್ಮ ಮೊದಲಾದ ಸಮುದಾಯ ಭವನಗಳ ನಿರ್ಮಾಣಕ್ಕೆ ತಲಾ 25ರಿಂದ 50 ಲ.ರೂ. ವರೆಗೆ ಅನುದಾನ ನೀಡ ಲಾಗಿದೆ ಎಂದರು.
Related Articles
Advertisement
ಗುರುಗಳ ತತ್ತ್ವ ಅನುಷ್ಠಾನವಾದರೆ ಅಶಾಂತಿ ದೂರನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಸಂದೇಶವನ್ನು ಒಳಗೊಂಡಂತೆ ಅವರ ತತ್ತಾದರ್ಶಗಳನ್ನು ದೇಶದ ಎಲ್ಲ ರಾಜಕೀಯ ಪಕ್ಷಗಳು ಅನುಷ್ಠಾನಕ್ಕೆ ತಂದರೆ ದೇಶದಲ್ಲಿ ಅಶಾಂತಿ ದೂರವಾಗುತ್ತದೆ. ದಲಿತರ, ದೌರ್ಜನ್ಯಕ್ಕೆ ಒಳಗಾದವರ ಹಾಗೂ ಹಿಂದುಳಿದವರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನರ ಅಭಿವೃದ್ಧಿಗೆ ಶ್ರಮಿಸಿದ ನಾರಾಯಣ ಗುರುಗಳು ದೇಶದ ಸಾಮಾಜಿಕ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದವರು. ಅವರ ಆದರ್ಶಗಳನ್ನು ನಾನು ಪಾಲಿಸುತ್ತೇನೆ. ಎಲ್ಲರೂ ಪಾಲನೆ ಮಾಡಬೇಕು ಎಂದು ಸಚಿವ ಪ್ರಮೋದ್ ತಿಳಿಸಿದರು.