Advertisement
30ರ ಪ್ರಾಯದಲ್ಲಿ ಆರಂಭನಾರಾಯಣ ಎಸ್. ಪೂಜಾರಿ (57) ಬಡ ಕುಟುಂಬದಲ್ಲಿ ಬೆಳೆದವರು. ಆರ್ಥಿಕ ಸಮಸ್ಯೆಯಿಂದಾಗಿ ಪ್ರಾಥಮಿಕ ಶಿಕ್ಷಣ ಮೊಟಕುಗೊಳಿಸಿ ಬದುಕಿಗಾಗಿ ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. 30ರ ಹರೆಯದಲ್ಲಿ ಶವ ಸಂಸ್ಕಾರ ಮಾಡುವ ಕೈಂಕರ್ಯವನ್ನು ಆರಂಭಿಸಿದ ಇವರ ಸೇವೆಗೆ ಪತ್ನಿ, ಪುತ್ರಿ ಹಾಗೂ ಪುತ್ರ ಪ್ರೋತ್ಸಾಹ ನೀಡುತ್ತಿದ್ದಾರೆ.
ನಾರಾಯಣ ಅವರು ಮೃತರ ಮನೆಗೆ ತೆರಳಿ ಶವ ಸಂಸ್ಕಾರಕ್ಕೆ ಅಗತ್ಯವಿರುವ ವಸ್ತುಗಳ ಕುರಿತು ಮಾಹಿತಿ ನೀಡುತ್ತಾರೆ. ಶವ ಸುಡಲು ಅಗತ್ಯವಿರುವ ಒಣ, ಹಸಿ ಮರಗಳನ್ನು ಗೆಳೆಯರ ಸಹಾಯದಿಂದ ತರಿಸಿಕೊಳ್ಳುತ್ತಾರೆ. ಮೃತ ದೇಹದ ಗಾತ್ರಕ್ಕೆ ಅಗತ್ಯವಿರುವ ಚಿತಾಗಾರ ನಿರ್ಮಿಸುತ್ತಾರೆ. ಮೃತನ ಮನೆಯವರು ಮಾಡಬೇಕಾದ ವಿಧಿವಿಧಾನಗಳ ಕುರಿತು ಸಂಪೂರ್ಣ ಮಾಹಿತಿ ನೀಡುತ್ತಾರೆ. ಬಾಲ್ಯದಿಂದಲೇ ತವಕ
ಚಿಕ್ಕಂದಿನಿಂದಲೇ ಶವ ಸಂಸ್ಕಾರದಲ್ಲಿ ಭಾಗಿಯಾಬೇಕು ಎನ್ನುವ ತವಕ ಅವರಲ್ಲಿ ಇತ್ತು. ಅದರೆ ಮನೆಯವರು ಅವಕಾಶ ನೀಡಿರಲಿಲ್ಲ. ಅಕ್ಕಪಕ್ಕದ ಮನೆಯವರು ಅಸುನೀಗಿದರೆ ಅವರ ಮನೆಗೆ ಹೋಗಿ ಶವ ಸಂಸ್ಕಾರ ಮಾಡುವ ವಿಧಾನ ನೋಡುತ್ತಿದ್ದರು.
Related Articles
Advertisement
ಆತ್ಮತೃಪ್ತಿಸಮಾಜಕ್ಕೆ ಸೇವೆ ನೀಡಬೇಕು ಎನ್ನುವ ಹಂಬಲವಿತ್ತು. ಕಳೆದ 27 ವರ್ಷದಿಂದ ಮೃತರ ಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆತ್ಮ ತೃಪ್ತಿ ಕಂಡುಕೊಂಡಿದ್ದೇನೆ.
-ನಾರಾಯಣ ಎಸ್. ಪೂಜಾರಿ, ಸಮಾಜ ಸೇವಕ. 27 ವರ್ಷಗಳ ಸೇವೆ
ಕಳೆದ 27 ವರ್ಷಗಳಿಂದ ಸುಮಾರು 1,000ಕ್ಕೂ ಹೆಚ್ಚಿನ ಮಂದಿಯ ಅಂತಿಮ ಸಂಸ್ಕಾರದಲ್ಲಿ ತನ್ನಿಂದಾದ ಸೇವೆಯನ್ನು ನೀಡುತ್ತ ಬಂದಿದ್ದಾರೆ. ಗ್ರಾಮದಲ್ಲಿ ಯಾರೇ ಅಸುನೀಗಲಿ ಹೆಣ ಸುಡುವುದಕ್ಕೆ ಮುಂದೆ ಬರುತ್ತಾರೆ. ಅದಕ್ಕಾಗಿ ಅವರು ಮನೆಯವರಿಂದ ಹಣ ಸ್ವೀಕರಿಸುವುದಿಲ್ಲ. ಅಂತಿಮ ವಿಧಿವಿಧಾನಗಳನ್ನು ಚಾಚೂ ತಪ್ಪದೆ ನೆರವೇರಿಸುತ್ತಾರೆ. ಕೆಲ ಸಂದರ್ಭ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವ್ಯಕ್ತಿ ಮೃತರಾದರೆ ಆರ್ಥಿಕ ಸಹಾಯ ಸಹ ಮಾಡಿದ್ದಾರೆ.