Advertisement

ಸಸ್ಪೆನ್ಸ್‌-ಥ್ರಿಲ್ಲರ್‌ “ನನ್ನ ಹುಡುಕಿಕೊಡಿ”ವರ್ಷಾಂತ್ಯಕ್ಕೆ ತೆರೆಗೆ

05:35 PM Aug 27, 2022 | Team Udayavani |

ಕನ್ನಡ ಚಿತ್ರರಂಗದಲ್ಲಿ “ತುಳಸಿ ದಳ’ ಸೇರಿದಂತೆ ಅನೇಕ ಸೂಪರ್‌ ಹಿಟ್‌ ಸಿನಿಮಾಗಳನ್ನು ನಿರ್ದೇಶಿಸಿರುವ ಹಿರಿಯ ನಿರ್ದೇಶಕ ವೇಮಗಲ್‌ ಜಗನ್ನಾಥ ರಾವ್‌, ಈ ಬಾರಿ “ನನ್ನ ಹುಡುಕಿಕೊಡಿ’ ಎಂಬ ಸಸ್ಪೆನ್ಸ್‌-ಥ್ರಿಲ್ಲರ್‌ ಸಿನಿಮಾವನ್ನು ತೆರೆಮೇಲೆ ತರಲು ಹೊರಟಿದ್ದಾರೆ.

Advertisement

ಈಗಾಗಲೇ ಸದ್ದಿಲ್ಲದೆ ಪ್ರೀ-ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ “ನನ್ನ ಹುಡುಕಿಕೊಡಿ’ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು.

ಸಿನಿಮಾದ ಮೊದಲ ದೃಶ್ಯಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್‌ ಕ್ಲಾಪ್‌ ಮಾಡಿದರೆ, ನಿರ್ದೇಶಕ ಮಹೇಶ್‌ ಕುಮಾರ್‌ ಕ್ಯಾಮೆರಾ ಸ್ವಿಚ್‌ ಆನ್‌ ಮಾಡುವ ಮೂಲಕ “ನನ್ನ ಹುಡುಕಿ ಕೊಡಿ’ ಸಿನಿಮಾದ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಇನ್ನು “ನನ್ನ ಹುಡುಕಿಕೊಡಿ’ ಸಿನಿಮಾದ ಮೂಲಕ ಕನಕಪುರ ಮೂಲದ ಧನ್ವಿತ್‌ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಮೀನಾಕ್ಷಿ ಜೈಸ್ವಾಲ್‌ ಹಾಗೂ ಸಾಯಿ ನಯನಾ ಸಿನಿಮಾದಲ್ಲಿ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಮುಹೂರ್ತದ ಬಳಿಕ “ನನ್ನ ಹುಡುಕಿಕೊಡಿ’ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ವೇಮಗಲ್‌ ಜಗನ್ನಾಥ ರಾವ್‌, “ಇದೊಂದು ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ಸಿನಿಮಾ. ಬಡ ಹುಡುಗನೊಬ್ಬ ಭವಿಷ್ಯದಲ್ಲಿ ಸೂಪರ್‌ಸ್ಟಾರ್‌ ಆದ ನಂತರ ತನ್ನ ತನವನ್ನು ಹೇಗೆ ಕಳೆದುಕೊಳ್ಳುತ್ತಾನೆ. ಕೊನೆಯಲ್ಲಿ ತನ್ನ ತನವನ್ನು ಹೇಗೆ ಕಂಡುಕೊಳ್ಳುತ್ತಾನೆ ಅನ್ನೋದು ಸಿನಿಮಾದ ಕಥೆಯ ಒಂದು ಎಳೆ’ ಎಂದು ಮಾಹಿತಿ ನೀಡಿದರು

Advertisement

. “ಧನ್ವಿತ್‌ ಫಿಲಂ ಫ್ಯಾಕ್ಟರಿ’ ಬ್ಯಾನರ್‌ನಲ್ಲಿನಿರ್ಮಾಣವಾಗುತ್ತಿರುವ “ನನ್ನ ಹುಡುಕಿಕೊಡಿ’ ಸಿನಿಮಾಕ್ಕೆ ವಾಸುಕಿ ಭುವನ್‌ ಸಹ ನಿರ್ಮಾಣವಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಈ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ ತಂಡ.

Advertisement

Udayavani is now on Telegram. Click here to join our channel and stay updated with the latest news.

Next