Advertisement

ನೀರು ಪಾಲಾಗುತ್ತಿದೆ ನಂದಿನಿ ನದಿ ತಡೆಗೋಡೆ

02:50 AM Jul 26, 2018 | Team Udayavani |

ಪಡುಪಣಂಬೂರು: ಇಲ್ಲಿನ ಸಸಿಹಿತ್ಲು ಹಾಗೂ ಪಡುಪಣಂಬೂರು ಗ್ರಾಮಕ್ಕೆ ನೇರವಾಗಿ ಕದಿಕೆ- ಹೊಯಿಗೆಗುಡ್ಡೆ ಪ್ರದೇಶದ ಸಂಪರ್ಕದ ಏಕೈಕ ರಸ್ತೆಯು ನಂದಿನಿ ನದಿಯ ತಡೆಗೋಡೆಯೊಂದಿಗೆ ನಿರ್ಮಾಣವಾಗಿದ್ದು, ಮಳೆಯ ನೀರು ನದಿಗೆ ಹರಿಯುವಾಗ ತಡೆಗೋಡೆಯ ಬಳಿಯಲ್ಲಿ ಹಾಕಿರುವ ಮಣ್ಣು ಸಹ ಕೊಚ್ಚಿಕೊಂಡು ನದಿಗೆ ಸೇರಿದ್ದು, ತಡೆಗೋಡೆಯ ಕಲ್ಲುಗಳು ಸಹ ನದಿ ಪಾಲಾಗುತ್ತಿವೆ.

Advertisement

ಸ್ಥಳೀಯರು ನಿರಂತರವಾಗಿ ಬಹುವರ್ಷದಿಂದ ನಡೆಸಿದ ಹೋರಾಟದಿಂದ ಸುಮಾರು 2.5 ಕೋ. ರೂ. ವೆಚ್ಚದಲ್ಲಿ ಸಚಿವರಾಗಿದ್ದ ಅಭಯಚಂದ್ರ ಜೈನ್‌ ಅವರು ಮೀನುಗಾರಿಕಾ ಇಲಾಖೆಯ ವಿಶೇಷ ನಿಧಿಯಲ್ಲಿ ನಬಾರ್ಡ್‌ ಯೋಜನೆಯ ಮೂಲಕ ಈ ರಸ್ತೆಯನ್ನು ನಿರ್ಮಿಸಿದರು. ಪಡುಪಣಂಬೂರು ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸೇರಿರುವ ಈ ರಸ್ತೆಯ ಅಂಚು ಕುಸಿತ ಕಂಡು ನದಿಗೆ ಹಾಕಲಾಗಿರುವ ತಡೆಗೋಡೆಯೂ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಇಲಾಖೆಯು ಸೂಕ್ತವಾಗಿ ದುರಸ್ತಿ ನಡೆಸದಿದ್ದಲ್ಲಿ ಇನ್ನಷ್ಟು ಉದ್ದದಲ್ಲಿ ತಡೆಗೋಡೆ ನದಿ ಪಾಲಾಗಿ ರಸ್ತೆಯೂ ಸಹ ನದಿಯ ಒಡಲಿಗೆ ಸೇರುವ ಆತಂಕ ಸ್ಥಳೀಯರಲ್ಲಿದೆ.

ಇಲಾಖೆಗೆ ತಿಳಿಸಲಾಗಿದೆ ನೂತನ ರಸ್ತೆಯಲ್ಲಿನ ಕುಸಿತದ ಬಗ್ಗೆ ಈಗಾಗಲೇ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಗಮನ ಸೆಳೆದಿದ್ದಾರೆ. ಇಲಾಖೆಯ ಎಂಜಿನಿಯರ್‌ ಗೆ ಮಾಹಿತಿ ನೀಡಿದ್ದೇವೆ. ತಡೆಗೋಡೆಯನ್ನು ಉಳಿಸದಿದ್ದಲ್ಲಿ ರಸ್ತೆಗೂ ಸಹ ಅಪಾಯವಿದೆ. ಕೋಟ್ಯಂತರ ರೂ. ವೆಚ್ಚದ ಯೋಜನೆಯು ನದಿ ನೀರು ಪಾಲಾಗುವುದನ್ನು ತಿಳಿಸಲಾಗಿದೆ.
– ಮೋಹನ್‌ದಾಸ್‌ ಅಧ್ಯಕ್ಷರು, ಗ್ರಾಮ ಪಂಚಾಯತ್‌, ಪಡುಪಣಂಬೂರು

ನೆಲಹಾಸು ಕಾಮಗಾರಿ ನಡೆಸುತ್ತೇವೆ
ತಡೆಗೋಡೆ ಕುಸಿತವನ್ನು ಇಲಾಖೆ ಗಮನಿಸಿದೆ. ಕೆಲವೊಂದು ಪ್ರದೇಶದಲ್ಲಿ ನದಿಯ ಮಟ್ಟವು ಆಳವಾಗಿರುವುದರಿಂದ ಈ ಭಾಗದಲ್ಲಿ ತಡೆಗೋಡೆ ಕುಸಿತ ಕಂಡಿದೆ. ನೆರೆ ನೀರಿನ ಸೆಳೆತ ಕ್ಷೀಣಿಸಿದ ತತ್‌ ಕ್ಷಣ ಕಾಮಗಾರಿ ಕೈಗೊಳ್ಳಲಾಗುವುದು. ರಸ್ತೆಯನ್ನು ಉಳಿಸುವ ಜವಾಬ್ದಾರಿ ಇಲಾಖೆಯದ್ದಾಗಿದೆ. ಕುಸಿತ ಪ್ರದೇಶದಲ್ಲಿ ಪಿಚಿಂಗ್‌ ನಂತೆ (ನೆಲಹಾಸು) ಕಾಮಗಾರಿ ನಡೆಸುತ್ತೇವೆ. 
– ಪ್ರವೀಣ್‌ ಕುಮಾರ್‌, ಸಹಾಯಕ ಎಂಜಿನಿಯರ್‌ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ , ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next