Advertisement

ಗಂಡು ಆನೆ ಮರಿಗೆ ನಾಮಕರಣ: ಶ್ರೀದತ್ತಾತ್ರೇಯನಾದ ಲಕ್ಷ್ಮೀ ಸುತ‌

07:50 PM Sep 15, 2022 | Team Udayavani |

ಮೈಸೂರು: ಅರಮನೆ ಆವರಣದಲ್ಲಿ ಲಕ್ಷ್ಮೀ ಆನೆಗೆ ಜನಿಸಿದ ಗಂಡು ಮರಿಗೆ ಶ್ರೀದತ್ತಾತ್ರೇಯ ಎಂದು ಅರಣ್ಯ ಇಲಾಖೆ ನಾಮಕರಣ ಮಾಡಿದೆ.

Advertisement

ಇದನ್ನೂ ಓದಿ:ನಿವೃತ್ತಿ ಘೋಷಿಸಿದ ಟೆನಿಸ್ ಲೋಕದ ದಿಗ್ಗಜ ರೋಜರ್ ಫೆಡರರ್

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಬಂಡೀಪುರದ ರಾಮಪುರ ಸಾಕಾನೆ ಶಿಬಿರದ 21 ವರ್ಷದ ಲಕ್ಷ್ಮೀ ಆನೆ ಮಂಗಳವಾರ ರಾತ್ರಿ ಗಂಡಾನೆಗೆ ಜನ್ಮ ನೀಡಿತ್ತು. ದಸರಾ ಆನೆ ಗಂಡು ಮರಿಗೆ ಜನ್ಮ ನೀಡಿದ ಸುದ್ದಿ ಕೇಳಿ ಇಡೀ ನಗರವೇ ಸಂಭ್ರಮಿಸಿತ್ತಲ್ಲದೇ ತಾಯಿ ಮತ್ತು ಮರಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಅರಮನೆ ಆವರಣದಲ್ಲಿ ಲಕ್ಷ್ಮೀ ಆನೆ ಗಂಡು ಮರಿಗೆ ಜನ್ಮ ನೀಡಿದ್ದರಿಂದ ಡಿಸಿಎಫ್ ಡಾ.ವಿ. ಕರಿಕಾಳನ್ ಅವರು ಆನೆ ಮರಿಗೆ  ಸೂಕ್ತ ಹೆಸರಿಡುವಂತೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಕೋರಿದ್ದರು. ಬಳಿಕ ಪ್ರಮೋದಾ ದೇವಿ ಒಡೆಯರ್ ಅವರು ಶ್ರೀದತ್ತಾತ್ರೇಯ ಎಂದು ಹೆಸರು ಸೂಚಿದ್ದರಿಂದ ಗುರುವಾರ ಲಕ್ಷ್ಮೀ ಸುತನಿಗೆ ಶ್ರೀದತ್ತೇಯ ಎಂದು ನಾಮಕರಣ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next