Advertisement

Nalkur: ವಿದ್ಯುತ್‌ ಪ್ರವಹಿಸಿ ಇಬ್ಬರಿಗೆ ಗಾಯ

12:34 AM Jul 26, 2024 | Team Udayavani |

ಗುತ್ತಿಗಾರು: ಇಲ್ಲಿನ ನಾಲ್ಕೂರು ಗ್ರಾಮದ ಕಾಯರ್‌ ಮುಗೆರ್‌ ಎಂಬಲ್ಲಿ ಎರಡು ದಿನಗಳ ಹಿಂದೆ ಗಾಳಿ ಮಳೆಗೆ ಬಿದ್ದ ವಿದ್ಯುತ್‌ ಲೈನ್‌ ಹತ್ತಿರ ಕೆಲಸ ಮಾಡುವಾಗ ವಿದ್ಯುತ್‌ ಪ್ರವಹಿಸಿ ಇಬ್ಬರಿಗೆ ಗಾಯವಾದ ಘಟನೆ ಸಂಭವಿಸಿದೆ.

Advertisement

ಇಲ್ಲಿನ ನಿವಾಸಿ ಸುಂದರ ಕಾಯರ್‌ ಮುಗೇರ್‌ ಅವರು ತಮ್ಮ ಜಾಗದೊಳಗಿನ ಮರ ಕಡಿಯುವಾಗ ಮೆಸ್ಕಾಂನಿಂದ ವಿದ್ಯುತ್‌ ಚಾರ್ಜ್‌ ಮಾಡಿದ್ದಾರೆ. ಪರಿಣಾಮ ವಿದ್ಯುತ್‌ ಪ್ರವಹಿಸಿ ಸುಂದರ ಅವರಿಗೆ ಶಾಕ್‌ ಹೊಡೆದಿದೆ. ಈ ವೇಳೆ ಅವರು ಬೊಬ್ಬೆ ಹೊಡೆದಿದ್ದು, ಇದನ್ನು ಕೇಳಿ ಸ್ಥಳೀಯ ನಿವಾಸಿ ಯೋಗೀಶ್‌ ಅವರ ಪತ್ನಿ ರಮ್ಯಾ ಓಡಿ ಬಂದಿದ್ದಾರೆ.

ಈ ಸಂದರ್ಭ ವಿದ್ಯುತ್‌ ಲೈನ್‌ ತುಳಿದು ರಮ್ಯಾ ಅವರೂ ಶಾಕ್‌ಗೊಳಗಾಗಿದ್ದಾರೆ. ತತ್‌ಕ್ಷಣ ಯೋಗೀಶ್‌ ಅವರು ಬಂದು ವಿದ್ಯುತ್‌ ಶಾಕ್‌ನಿಂದ ಬಿಡಿಸಿದ್ದಾರೆ. ಗಾಯಾಳುಗಳಿಗೆ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next