Advertisement

ದುಷ್ಕರ್ಮಿಗಳ ಶೀಘ್ರ ಬಂಧನಕ್ಕೆ  ನಳಿನ್‌ ಆಗ್ರಹ

07:15 AM Aug 22, 2017 | Team Udayavani |

ಮಂಗಳೂರು: ಪಶ್ಚಿಮ ವಲಯ ಐಜಿಪಿ ಅವರ ಸರಕಾರಿ ನಿವಾಸದ ಆವರಣದಿಂದಲೇ ಗಂಧದ ಮರಗಳನ್ನು ಕಳವು ಮಾಡಿರುವುದು ಗಂಭೀರ ಪ್ರಕರಣವಾಗಿದ್ದು  ಕೃತ್ಯ ನಡೆಸಿರುವ ದುಷ್ಕರ್ಮಿಗಳನ್ನು  ಪತ್ತೆಹಚ್ಚಿ  ಕೂಡಲೇ ಬಂಧಿಸಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಆಗ್ರಹಿಸಿದ್ದಾರೆ.

Advertisement

ನಾಲ್ಕು ಜಿಲ್ಲೆಗಳ ಜವಾಬ್ದಾರಿಯನ್ನು  ಹೊಂದಿರುವ  ಉನ್ನತ ಪೊಲೀಸ್‌ ಅಧಿಕಾರಿಯೋರ್ವರ ನಿವಾಸದಲ್ಲೇ ಈ ರೀತಿಯ ಕೃತ್ಯ ನಡೆದಿದ್ದರೂ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ಖೇದಕರವಾಗಿದೆ. ದುಷ್ಕರ್ಮಿಗಳನ್ನು ಶೀಘ್ರ ಬಂಧಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿಕೆಯಲ್ಲಿ  ತಿಳಿಸಿದ್ದಾರೆ.

ಸೂಕ್ತ ತನಿಖೆಯಾಗಲಿ
ಐಜಿಪಿ ಅವರ ಸರಕಾರಿ ಬಂಗ್ಲೆ ಆವರಣದಲ್ಲಿದ್ದ  ಶ್ರೀಗಂಧದ ಮರ ವನ್ನು  ದುಷ್ಕರ್ಮಿಗಳು ಕಳವು ಮಾಡಿರುವುದು ಸಣ್ಣ ವಿಚಾರವಲ್ಲ. ಹಿರಿಯ ಪೊಲೀಸ್‌ ಅಧಿಕಾರಿಗಳ ನಿವಾಸಕ್ಕೆ  ಕಳ್ಳರು ಕಾಲಿಡುತ್ತಾರೆ ಎಂದರೆ  ಇನ್ನು  ಜನಸಾಮಾನ್ಯರ ಪಾಡೇನು ಎಂದು ಬಿಜೆಪಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ  ಡಿ. ವೇದವ್ಯಾಸ ಕಾಮತ್‌ ಹೇಳಿದ್ದಾರೆ.ಐಜಿಪಿ ಅವರ ಬಂಗ್ಲೆ ಆವರಣದಿಂದ ಶ್ರೀಗಂಧದ ಮರ ಕಳವು ಆಗುತ್ತಿರು ವುದು ಇದೇ ಮೊದಲಲ್ಲ. 

ಈ ಹಿಂದೆ ಸತ್ಯನಾರಾಯಣ ರಾವ್‌ ಅವರು ಐಜಿಪಿಯಾಗಿದ್ದ  ಅವಧಿಯಲ್ಲಿ ಇಲ್ಲಿಂದ ಬೃಹತ್‌ ಗಂಧದ ಮರ ಕಳವು ಆಗಿತ್ತು. ಈ ಕೃತ್ಯದ ಹಿಂದೆ ಬಹುದೊಡ್ಡ  ಮಾಫಿಯಾ ಇರುವುದು ಸ್ಪಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ  ಸೂಕ್ತ ತನಿಖೆ ನಡೆಯಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next