Advertisement

ಬಿಜೆಪಿಯಿಂದ ಲಿಂಗಾಯತರು ಮುಂದೆಯೂ ಸಿಎಂ: Nalinkumar Kateel

12:22 AM Apr 18, 2023 | Team Udayavani |

ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಿರುವುದು ಕಡಿಮೆ ಅವಧಿಯಾಗಿದ್ದರೂ ಅಷ್ಟರಲ್ಲಿ ಲಿಂಗಾಯತರಿಗೆ 3 ಬಾರಿ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷ ಸ್ಥಾನ, ವಿಪಕ್ಷ ನಾಯಕನ ಸ್ಥಾನಮಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿಯೂ ಲಿಂಗಾಯತರು ಮುಖ್ಯಮಂತ್ರಿಯಾಗುವುದು ಬಿಜೆಪಿಯಿಂದಲೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

Advertisement

ಮಂಗಳೂರಿನಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ವಿರುದ್ಧ ಯಾರೇ ನಿಂತರೂ ಗೆಲುವು ಬೊಮ್ಮಾಯಿ ಅವರದ್ದೇ. ಜಗದೀಶ್‌ ಶೆಟ್ಟರು ಬಿಜೆಪಿಯ ಹಿರಿಯ ನಾಯಕರಾಗಿದ್ದವರು. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದ ಶೆಟ್ಟರು ಪಕ್ಷದಲ್ಲಿ ಎಲ್ಲ ಸ್ಥಾನಮಾನ, ಗೌರವ, ಅಧಿಕಾರ ಅನುಭವಿಸಿದವರು. ಮಾತ್ರವಲ್ಲದೆ ಅವರ ಸಂಧಾನ ಮಾತುಕತೆಯಲ್ಲಿ ಕೇಂದ್ರದ ನಾಯಕರು ಸ್ಥಾನಮಾನ ಕೊಡುವುದಾಗಿ ತಿಳಿಸಿದ್ದರು. ಕಾಂಗ್ರೆಸ್‌ನಲ್ಲಿ ಮುಂದೆ ಅವರ ಪರಿಸ್ಥಿತಿ ಏನೆಂದು ಗೊತ್ತಾಗಲಿದೆ ಎಂದರು.

ಪುತ್ತೂರಿನಲ್ಲಿ ಪಕ್ಷದಲ್ಲಿ ಎದ್ದಿರುವ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿದ ನಳಿನ್‌ ಕುಮಾರ್‌, ಪಕ್ಷದ ಬಂಡಾಯದ ಬಗ್ಗೆ ಪಕ್ಷದ ಹಿರಿಯರು ಮಾತುಕತೆ ನಡೆಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next