Advertisement

ನಾಳ: ಮನೆಯಿಂದ ಚಿನ್ನಾಭರಣ ಕಳವು

06:56 AM Feb 10, 2018 | Team Udayavani |

ಬೆಳ್ತಂಗಡಿ: ಗೇರುಕಟ್ಟೆ ಸಮೀಪದ ನಾಳದಲ್ಲಿ ಗುರುವಾರ ರಾತ್ರಿ ಮನೆಗೆ ನುಗ್ಗಿ ಕಳ್ಳತನ ನಡೆದಿದೆ. ನಾಳ ದೇವಸ್ಥಾನ ಸಮೀಪದ ಅಮೃತವರ್ಷಿಣಿ ನಿಲಯದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ವಸಂತ್‌ ಅವರ ಮನೆಯಲ್ಲಿ  ಸುಮಾರು 8 ಪವನ್‌ ತೂಕದ ಚಿನ್ನಾಭರಣ ಕಳವಾಗಿದೆ. ವಸಂತ್‌ ಅವರು ಅನಾರೋಗ್ಯ ನಿಮಿತ್ತ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಮನೆಯವರು ಕೂಡ ಆಸ್ಪತ್ರೆಯಲ್ಲೇ ಇದ್ದರು. ಈ ಸಂದರ್ಭದಲ್ಲಿ ಕಳ್ಳರು ಚಿಲಕ ಮುರಿದು ಒಳನುಗ್ಗಿ ಚಿನ್ನಾಭರಣ ಕದ್ದಿದ್ದಾರೆ. ಶುಕ್ರವಾರ ಅಪರಾಹ್ನ ವಸಂತ್‌  ಪುತ್ರ ಸಂದೇಶ್‌ ಬಂದು ನೋಡಿದಾಗ ವಿಷಯ ತಿಳಿದಿದೆ.

Advertisement

ಬೆಳ್ತಂಗಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ನಾಗೇಶ್‌ ಕದ್ರಿ, ಎಸ್‌ಐ ರವಿ ಬಿ.ಎಸ್‌. ಮೊದಲಾದವರು  ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಮಂಗಳೂರಿನಿಂದ ಆಗಮಿಸಿ ಪರಿಶೀಲಿಸಿದ್ದಾರೆ. 

ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next