Advertisement

ನೇಕಾರ ಸಮ್ಮಾನ್‌ ಯೋಜನೆ: ಅರ್ಜಿಗೆ 16 ಕೊನೆಯ ದಿನ

06:00 AM Jun 13, 2020 | Suhan S |

ಬಾಗಲಕೋಟೆ: ಕೋವಿಡ್‌-19 ಮಹಾಮಾರಿ ಹಾಗೂ ಆರ್ಥಿಕ ಹಿನ್ನೆಡೆಯಿಂದ ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ ಸರಕಾರ ಘೋಷಿಸಿದಂತೆ ನೇಕಾರ ಸಮ್ಮಾನ್‌ ಯೋಜನೆಯಡಿ ಎರಡು ಸಾವಿರ ರೂ. ಆರ್ಥಿಕ ಸಹಾಯಧನ ಪಡೆಯಲು ಜೂ. 16 ಕೊನೆಯ ದಿನವಾಗಿದೆ.

Advertisement

ಆರ್ಥಿಕ ನೆರವು ಪಡೆಯುವ ಕೈಮಗ್ಗ ನೇಕಾರರು 4ನೇ ರಾಷ್ಟ್ರೀಯ ಕೈಮಗ್ಗ ಗಣತಿಯಲ್ಲಿ ನೋಂದಾಯಿಸಿರಬೇಕು. ಆಧಾರ್‌ ಲಿಂಕ್‌ ಮಾಡಿದ ಬ್ಯಾಂಕ್‌ ಖಾತೆ ವಿವರ, ಪೆಹಚಾನ್‌ ಕಾರ್ಡ ಮತ್ತು ರೇಷನ್‌ ಕಾರ್ಡ್‌ ವಿವರವನ್ನು ಗುರುತಿಸಿದ ನೇಕಾರ ಸಹಕಾರ ಸಂಘ, ಕೆಎಚ್‌ಡಿಸಿ, ಖಾದಿ ಕೇಂದ್ರಗಳಿಗೆ ಭೇಟಿ ನೀಡಿ ಸೇವಾ ಸಿಂಧು ವೆಬ್‌ ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಬಾಗಲಕೋಟೆ ದೂ:08354-235463ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next