Advertisement

ನಾಯ್ಡು ಪರಿಶೀಲನೆ ವಿವಾದ

07:44 AM Jun 16, 2019 | mahesh |

ವಿಜಯವಾಡ: ದಿಲ್ಲಿಗೆ ಪ್ರಯಾಣ ಬೆಳೆಸಲು ಶುಕ್ರವಾರ ರಾತ್ರಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಜನಸಾಮಾನ್ಯರಂತೆ ಪರಿಶೀಲನೆ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಮಾವೋವಾದಿಗಳ ಟಾರ್ಗೆಟ್ ಆಗಿರುವ ಅವರಿಗೆ ಕೇಂದ್ರ ಸರಕಾರ ಝೆಡ್‌ ಪ್ಲಸ್‌ ಭದ್ರತೆ ನೀಡಿದೆ. ಅಂಥ ಭದ್ರತೆ ಇರುವವರಿಗೆ ವಿಮಾನ ನಿಲ್ದಾಣದಲ್ಲಿ ವಿಮಾನ ಇರುವ ಕಡೆಗೆ ನೇರವಾಗಿ ತಮ್ಮ ವಾಹನಗಳಲ್ಲಿ ತೆರಳಿ ವಿಮಾನ ಹತ್ತಬಹುದು.

Advertisement

ಆದರೆ, ಶುಕ್ರವಾರ ರಾತ್ರಿ ವಿಮಾನ ನಿಲ್ದಾಣದ ಮುಖ್ಯ ದ್ವಾರದಲ್ಲೇ ನಾಯ್ಡು ಅವರ ಭದ್ರತಾ ವಾಹನಗಳನ್ನು ತಡೆಯಲಾಗಿದ್ದು, ಅವರನ್ನು ಸಾಮಾನ್ಯರಂತೆ ಪರಿಶೀಲನೆಗೊಳಪಡಿಸಲಾಯಿತು. ಆಅನಂತರ, ಟರ್ಮಿನಲ್ ಮೂಲಕ ಸಾಗುವ ಬಸ್‌ನಲ್ಲಿ ಜನಸಾಮಾನ್ಯರ ಜತೆ ವಿಮಾನದ ಕಡೆ ಕರೆದೊಯ್ಯಲಾಯಿತು ಎನ್ನಲಾಗಿದೆ. ಇದನ್ನು ತೀವ್ರವಾಗಿ ಟೀಕಿಸಿರುವ ಟಿಡಿಪಿ, ನಾಯ್ಡು ಅವರನ್ನು ನಡೆಸಿಕೊಂಡಿರುವ ರೀತಿ ‘ಅಧಿಕಾರ ದರ್ಪದ ಪ್ರತೀಕ’ ಎಂದು ಕರೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next