Advertisement

ಕರ್ತಾರ್ಪುರ ಕಾರಿಡಾರ್‌ಗೆ ನಾಳೆ ನಾಯ್ಡು ಶಿಲಾನ್ಯಾಸ

06:00 AM Nov 25, 2018 | Team Udayavani |

ಹೊಸದಿಲ್ಲಿ: ಉದ್ದೇಶಿತ ಕರ್ತಾರ್ಪುರ ಕಾರಿಡಾರ್‌ ಯೋಜನೆಗೆ ಗುರುದಾಸ್ಪುರದ ಮನ್‌ ಗ್ರಾಮದಲ್ಲಿ ಇದೇ 26ರಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ಕೇಂದ್ರ ಸಚಿವರಾದ ಗಡ್ಕರಿ, ಹರ್‌ಸಿಮ್ರತ್‌ ಕೌರ್‌, ಪಂಜಾಬ್‌ ಸಿಎಂ ಅಮರೀಂದರ್‌ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Advertisement

ಇನ್ನೊಂದೆಡೆ, ನ.28ರಂದು ಪಾಕಿಸ್ತಾನದಲ್ಲೂ ಕಾರಿಡಾರ್‌ಗೆ ಅಡಿಗಲ್ಲು ಹಾಕುವ ಕಾರ್ಯಕ್ರಮ ನಡೆಯಲಿದ್ದು, ಅದಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಆಹ್ವಾನಿಸಲಾಗಿದೆ. ಪಾಕ್‌ ಪ್ರಧಾನಿಯ ಆಹ್ವಾನದ ಮೇರೆಗೆ ತಾವೂ ಭಾಗವಹಿ ಸುವುದಾಗಿ ಸಚಿವ ನವಜೋತ್‌ ಸಿಂಗ್‌ ಸಿಧು ತಿಳಿಸಿದ್ದಾರೆ. ಬರ್ಲಿನ್‌ ಗೋಡೆ ಕೆಡವಿ ಜರ್ಮನಿಯ ನಗರಗಳು ಒಂದಾದಂತೆ, ಕರ್ತಾರ್ಪುರ ಕಾರಿಡಾರ್‌ ಭಾರತ-ಪಾಕ್‌ ನಡುವೆ ಸ್ನೇಹಸೇತು ಆಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next