Advertisement

ಮತ್ತೆ ಮೈತ್ರಿಯತ್ತ ವಾಲಿದ ಮುಳಬಾಗಿಲು ಪಕ್ಷೇತರ ಶಾಸಕ

03:57 PM Feb 13, 2019 | |

ಬೆಂಗಳೂರು : ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ  ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್‌ ಮತ್ತೆ ಬೆಂಬಲ ನೀಡಿದ್ದಾರೆ.

Advertisement

ಬುಧವಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಾಗೇಶ್‌ ಸರ್ಕಾರಕ್ಕೆ ಬೆಂಬಲ ಪತ್ರವನ್ನು ಮತ್ತೆ ನೀಡಿದ್ದಾರೆ. ಈ ವೇಳೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು ಹಾಜರಿದ್ದರು. 

ನಾಗೇಶ್‌ ಅವರು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸಿದ್ದರಾಮಯ್ಯ ಬಳಿ ತೆರಳಿ ಬೆಂಬಲ ನೀಡಿದ್ದಾರೆ. 

ಪಕ್ಷೇತರರಾಗಿದ್ದ ನಾಗೇಶ್‌ ಮತ್ತು ಆರ್‌.ಶಂಕರ್‌ ಅವರು ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಕಳೆದ ತಿಂಗಳಿನಲ್ಲಿ  ಹಿಂಪಡೆದುಕೊಂಡು ಬಿಜೆಪಿ ಬೆಂಬಲಿಸುವುದಾಗಿ ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next