Advertisement

New Port Mangaluru ಬಂದರು ಪ್ರಾಧಿಕಾರಕ್ಕೆ ನಾಗೇಂದ್ರನಾಥ್‌ ಸಿನ್ಹಾ ಭೇಟಿ

11:52 PM Sep 08, 2023 | Team Udayavani |

ಪಣಂಬೂರು: ಕೇಂದ್ರ ಉಕ್ಕು ಸಚಿವಾಲಯದ ಕಾರ್ಯದರ್ಶಿ ನಾಗೇಂದ್ರನಾಥ್‌ ಸಿನ್ಹಾ ಐಎಎಸ್‌ ಶುಕ್ರವಾರ ನವಮಂಗಳೂರು ಬಂದರು ಪ್ರಾಧಿಕಾರಕ್ಕೆ ಭೇಟಿ ನೀಡಿದರು.

Advertisement

ಕುದುರೆಮುಖ ಅದಿರು ಸಂಸ್ಥೆಯಿಂದ ಕಬ್ಬಿಣದ ಅದಿರು, ಕಚ್ಚಾ ವಸ್ತುಗಳ ಆಮದು ಮತ್ತು ಕಬ್ಬಿಣದ ಉಂಡೆಗಳ ರಫ್ತು ನಿರ್ವಹಣೆ ಸೌಲಭ್ಯಗಳನ್ನು ಪರಿಶೀಲಿಸಿದರಲ್ಲದೆ ಅಭಿವೃದ್ಧಿಯ ಕುರಿತು ಚರ್ಚಿಸಿದರು.

ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ| ಎ.ವಿ. ರಮಣ ಅವರು ಪ್ರಾಧಿಕಾರಿ ತೆಗದುಕೊಂಡ ವಿವಿಧ ಯೋಜನೆಗಳ ವಿವರಿಸಿದರು. ಈ ವೇಳೆ ಅವರು ಗ್ಲೋಬಲ್‌ ಮೇರಿಟೈಮ್‌ ಇಂಡಿಯಾ ಶೃಂಗಸಭೆ 2023ರ ಲಾಂಛನ ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದರು. ಕೆಐಒಸಿಎಲ್‌ ಸಿಎಂಡಿ ಟಿ. ಸಾಮಿನಾಥನ್‌, ಬಂದರಿನ ಉಪಾಧ್ಯಕ್ಷ ಕೆ.ಜಿ. ನಾತ್‌, ಕಂಪೆನಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next