Advertisement

ತೆಲುಗಿನತ್ತ ನಾಗಶೇಖರ್‌ ಚಿತ್ತ

02:10 PM Mar 26, 2018 | |

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ನಾಗಶೇಖರ್‌ ನಿರ್ದೇಶನದ “ನವೆಂಬರ್‌ನಲ್ಲಿ ನಾನು ಅವಳು’ ಚಿತ್ರೀಕರಣ ಆರಂಭವಾಗಬೇಕಿತ್ತು. ರವಿಚಂದ್ರನ್‌ ಅವರ ಪುತ್ರ ವಿಕ್ರಮ್‌ ನಾಯಕರಾಗಿದ್ದ ಈ ಚಿತ್ರದ ಟೀಸರ್‌ ಕೂಡ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರ ಆರಂಭವಾಗಿಲ್ಲ. ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಈ ಚಿತ್ರವನ್ನು ನಿರ್ಮಿಸಬೇಕಿತ್ತು. ಸದ್ಯಕ್ಕೆ ಅವರು ಆ ಸಿನಿಮಾವನ್ನು ಯಾವಾಗ ಶುರು ಮಾಡುತ್ತಾರೋ ಗೊತ್ತಿಲ್ಲ. “ಸಿನಿಮಾ ಇಷ್ಟೊತ್ತಿಗೆ ಆರಂಭವಾಗಬೇಕಿತ್ತು. ಆದರೆ, ನಿರ್ಮಾಪಕರು ಸ್ವಲ್ಪ ಸಂಕಷ್ಟದಲ್ಲಿದ್ದಾರೆ. ನಿರ್ಮಾಪಕರ ಸಂಕಷ್ಟ, ನಮ್ಮ ಸಂಕಷ್ಟವಿದ್ದಂತೆ. ಹಾಗಾಗಿ, ಕಾಯುತ್ತಿದ್ದೇನೆ. ನಾನು ಅಥವಾ ನಿರ್ಮಾಪಕರು ಸಿನಿಮಾ ಮಾಡುತ್ತಿಲ್ಲ ಎಂದು ಯಾರೂ ಕಣ್ಣೀರು ಹಾಕುತ್ತಿಲ್ಲ. ನಿಧಾನವಾಗಿಯಾದರೂ ಒಳ್ಳೆಯ ಸಿನಿಮಾ ಮಾಡುತ್ತೇನೆ’ ಎನ್ನುತ್ತಾರೆ ನಾಗಶೇಖರ್‌. 

Advertisement

ಈ ಹಿಂದೆ ನಾಗಶೇಖರ್‌ ತೆಲುಗು ಸಿನಿಮಾ ಮಾಡುತ್ತಾರೆಂಬ ಸುದ್ದಿಯೂ ಓಡಾಡುತ್ತಿತ್ತು. ಈ ಬಗ್ಗೆ ಕೇಳಿದರೆ ತೆಲುಗು ಸಿನಿಮಾ ಒಪ್ಪಿಕೊಂಡಿರುವುದಾಗಿ ಹೇಳುತ್ತಾರೆ. “ತೆಲುಗು ನಟ ರಾಜಶೇಖರ್‌ ಅವರಿಗೆ ಎರಡು ಸಿನಿಮಾ ಮಾಡಿಕೊಡುವುದಾಗಿ ಕಮಿಟ್‌ ಆಗಿದ್ದೇನೆ. ಒಂದು ಅವರಿಗೆ ಹಾಗೂ ಇನ್ನೊಂದು ಅವರ ಮಗಳ ಶಿವಾನಿಗೆ. ಸದ್ಯದಲ್ಲೇ ಆ ಸಿನಿಮಾಗಳು ಆರಂಭವಾಗಲಿವೆ’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ ನಾಗಶೇಖರ್‌. ಸದ್ಯ ನಾಗಶೇಖರ್‌ ಕಥೆ ಬರೆಯುವುದರಲ್ಲಿ ಬಿಝಿಯಾಗಿದ್ದಾರಂತೆ. 

ಈ ನಡುವೆಯೇ ಅಂಬರೀಶ್‌ ಪುತ್ರ ಅಭಿಷೇಕ್‌ ಸಿನಿಮಾ ನಿರ್ದೇಶನದ ವಿಷಯದಲ್ಲಿ ಈಗಾಗಲೇ ಅನೇಕ ನಿರ್ದೇಶಕರ ಹೆಸರು ಓಡಾಡಿದ್ದು, ಈಗ ನಾಗಶೇಖರ್‌ ಹೆಸರು ಕೂಡಾ ಕೇಳಿಬರುತ್ತಿದೆ. ಹಾಗಂತ ಇಲ್ಲಿವರೆಗೆ ಯಾವುದೂ ಅಂತಿಮವಾಗಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next