Advertisement

ದೇಶದ ಮೂರನೇ ಅತಿದೊಡ್ಡ ಸರೋವರ ನಾಗಾರ್ಜುನ ಸಾಗರ್‌

06:22 PM Sep 24, 2020 | Karthik A |

ತೆಲಂಗಾಣದ ನಲ್ಗೊಂಡ ಮತ್ತು ಖಮ್ಮಮ್‌ ಜಿಲ್ಲೆಗಳಿಗೆ ನೀರು ಸರಬರಾಜು ಮತ್ತು ನೀರಾವರಿ ಉದ್ದೇಶಕ್ಕಾಗಿ ಬೃಹತ್‌ ಅಣೆಕಟ್ಟು ನಿರ್ಮಿಸಲಾಗಿದೆ. ಈ ಯೋಜನೆಯು ಸುಮಾರು 215000 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದ್ದು, ಭಾರತದ ಅತಿದೊಡ್ಡ ಕಾಲುವೆ ವ್ಯವಸ್ಥೆ ಜಾಲವನ್ನು ಈ ಯೋಜನೆ ಹೊಂದಿದೆ.

Advertisement

ಮೂರನೇ ಅತಿದೊಡ್ಡ ಸರೋವರ
ಅಣೆಕಟ್ಟಿನಲ್ಲಿ ಎರಡು ಕಾಲುವೆಗಳಿವೆ, ಎಡ ಮತ್ತು ಬಲ ಕಾಲುವೆಗಳು ಜಲಾಶಯದಿಂದ ನೀರನ್ನು ಪೂರೈಸುತ್ತವೆ. ನೀರಾವರಿ ಮತ್ತು ಜಲ ವಿದ್ಯುತ್‌ ಉತ್ಪಾದನೆಗಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಿರ್ಮಿಸಲಾದ ಆರಂಭಿಕ ಯೋಜನೆಗಳಲ್ಲಿ ಅಣೆಕಟ್ಟು ಕೂಡ ಒಂದು. ಪ್ರವಾಸೋದ್ಯಮದ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ, ಅಣೆಕಟ್ಟಿನ ಹಿಂದೆ ಒಂದು ಸರೋವರವನ್ನು ಅಭಿವೃದ್ಧಿಪಡಿಸಲಾಗಿದೆ, ಇದು ವಿಶ್ವದ ಎಲ್ಲೆ ಡೆಯೂ ಮಾನವ ನಿರ್ಮಿತ ಮೂರನೇ ಅತಿದೊಡ್ಡ ಸರೋವರವಾಗಿದೆ.

ವಿಜಯಪುರಿ
ಪ್ರಾಚೀನ ಇತಿಹಾಸದಲ್ಲಿ ನಾಗಾರ್ಜುನ ಸಾಗರ್‌ ಅನ್ನು ವಿಜಯಪುರಿ ಎಂದು ಕರೆಯಲಾಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ನಾಗಾರ್ಜುನ ಸಾಗರ್‌ ಎಂದು ಮರುನಾಮಕರಣಗೊಂಡಿದ್ದು, 2ನೇ ಶತಮಾನದಲ್ಲಿ ಈ ಪ್ರದೇಶವನ್ನು ಆಳಿದ ನಾಗಾರ್ಜುನರ ಸ್ಮರಣಾರ್ಥವಾಗಿ ನಾಗಾರ್ಜುನ ಸಾಗರ್‌ ಎಂಬ ಹೆಸರಿಡಲಾಗಿದೆ. ಅತ್ಯಂತ ಗೌರವಾನ್ವಿತ ಬೌದ್ಧ ಸನ್ಯಾಸಿಗಳಲ್ಲಿ ನಾಗಾರ್ಜುನ ಓರ್ವರಾಗಿದ್ದು, ನಾಗಾರ್ಜುನ ಸಾಗರ್‌ ಈ ಹಿಂದೆ ಬೌದ್ಧ ಬೋಧನೆ ಮತ್ತು ಪ್ರಚಾರಕ್ಕಾಗಿ ಒಂದು ಪ್ರಮುಖ ತಾಣವಾಗಿತ್ತು.

ಐತಿಹಾಸಿಕ ತಾಣಗಳ
ನಾಗಾರ್ಜುನ ಸಾಗರ್‌ ಪ್ರವಾಸದ ಸಮಯದಲ್ಲಿ ಭೇಟಿ ನೀಡಬೇಕಾದ ಕೆಲವು ಪ್ರವಾಸಿ ಆಕರ್ಷಣೆಗಳೆಂದರೆ ನಾಗಾರ್ಜುನ ಸಾಗರ್‌ ಅಣೆಕಟ್ಟು, ಇದು 1966 ರಲ್ಲಿ ಪೂರ್ಣಗೊಂಡಿತು ಮತ್ತು 124 ಮೀಟರ್‌ ಎತ್ತರ ಮತ್ತು 1 ಕಿಲೋಮೀಟರ್‌ ಉದ್ದವನ್ನು ಹೊಂದಿದೆ. ಅಣೆಕಟ್ಟಿನಲ್ಲಿ 26 ಗೇಟ್‌ಳಿವೆ.ಅಣೆಕಟ್ಟಿನ ಸುತ್ತಲೂ 3ನೇ ಶತಮಾನದ ಬೌದ್ಧ ಉತ್ಖನನದ ಅವಶೇಷಗಳು ಕಂಡುಬಂದ ಐತಿಹಾಸಿಕ ತಾಣಗಳಿವೆ.

ಅತಿ ಎತ್ತರದ ಕಲ್ಲಿನ ಅಣೆಕಟ್ಟು
ಇದು ವಿಶ್ವದ ಅತಿ ಎತ್ತರದ ಕಲ್ಲಿನ ಅಣೆಕಟ್ಟು. ಅಣೆಕಟ್ಟು ಜಲವಿದ್ಯುತ್ನ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಈ ಮೊದಲು ನಂದಕೊಂಡ ಯೋಜನೆ ಎಂದು ಕರೆಯಲಾಗುತ್ತಿದ್ದ ಈ ಅಣೆಕಟ್ಟನ್ನು ಕೃಷ್ಣ ನದಿಯಲ್ಲಿ ನಿರ್ಮಿಸಲಾಗಿದ್ದು, ಇದು ಸುಂದರವಾದ ಸೌಂದರ್ಯವನ್ನು ನೀಡುತ್ತದೆ.

Advertisement

ಆಕರ್ಷಣೆ ದ್ವೀಪ
ನಾಗಾರ್ಜುನಕೊಂಡವು ನಾಗಾರ್ಜುನ ಸಾಗರ್‌ ಸರೋವರದ ಮಧ್ಯದಲ್ಲಿರುವ ಒಂದು ಆಕರ್ಷಣೆ ದ್ವೀಪ ವಸ್ತುಸಂಗ್ರಹಾಲಯವಾಗಿದೆ. ಈ ವಸ್ತುಸಂಗ್ರಹಾಲಯದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಕಲೆಯ ಗಮನಾರ್ಹ ಅವಶೇಷಗಳಿವೆ, ಇನ್ನು ಟಿಎಸ್‌ಟಿಡಿಸಿ ನಿರ್ವಹಿಸುವ ಬೋಟಿಂಗ್‌ ಪಾಯಿಂಟ್‌ನಿಂದ ದೋಣಿ ವಿಹಾರವನ್ನು ಮಾಡೋದನ್ನು ಮರೆಯದಿರಿ. ಇದು ನಾಗಾರ್ಜುನ ಸಾಗರ್‌ ಪ್ರವಾಸದ ಸಮಯದಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳವಾಗಿದೆ. ವಸ್ತುಸಂಗ್ರಹಾಲಯದ ಮುಖ್ಯ ಸ್ತೂಪವಾದ ಮಹಾಚೈತ್ಯ ಬುದ್ಧನ ಅವಶೇಷಗಳನ್ನು ಇದು ಒಳಗೊಂಡಿದೆ.

ಇನ್ನು ನಾಗಾರ್ಜುನ ಸಾಗರ್‌ ಅಣೆಕಟ್ಟು ಹೈದರಾಬಾದ್‌ನಿಂದ ಬರುವ ವಾರಾಂತ್ಯದ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ. ಮಳೆಗಾಲದಲ್ಲಿ (ಸೆಪ್ಟಂಬರ್‌ / ಅಕ್ಟೋಬರ್‌ನಲ್ಲಿ) ಅಣೆಕಟ್ಟು ದ್ವಾರಗಳು ತೆರೆದಾಗ ಸಾವಿರಾರು ಪ್ರವಾಸಿಗರು ನಾಗಾರ್ಜುನಸಾಗರ್‌ಗೆ ಭೇಟಿ ನೀಡುತ್ತಾರೆ.

 

Advertisement

Udayavani is now on Telegram. Click here to join our channel and stay updated with the latest news.

Next