Advertisement

Chikkaballapur ಈಶಾ ಕೇಂದ್ರದಲ್ಲಿ ನಾಗರ ಪಂಚಮಿ ಆಚರಣೆ

11:24 PM Aug 21, 2023 | Team Udayavani |

ಚಿಕ್ಕಬಳ್ಳಾಪುರ: ಅವಲಗುರ್ಕಿ ಸಮೀಪ ಇರುವ ಈಶಾ ಕೇಂದ್ರದ ಸದ್ಗುರು ಸನ್ನಿಧಿಯಲ್ಲಿ ಸೋಮವಾರ ನಾಗರ ಪಂಚಮಿ ಪ್ರಯುಕ್ತ ನಾಗಾರಾಧನೆ ಹಾಗೂ ನಾಗ ಮಂಡಲ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು.

Advertisement

ಆದಿಯೋಗಿ ಮೂರ್ತಿ ಇರುವ ಈಶಾ ಕೇಂದ್ರದಲ್ಲಿ ನಾಗ ಮಂಟಪವನ್ನು ಸ್ಥಾಪಿಸಲಾಗಿದ್ದು, ಸದ್ಗುರುಗಳಿಂದ ಇಡೀ ದಿನ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತ ವಾಗಿ ನಡೆಸಲಾಯಿತು.

ದೇಶ, ವಿದೇಶಗಳಿಂದ ಆಗಮಿಸಿದ್ದ ಭಕ್ತರು ನಾಗಮಂಡಲ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಉಡುಪಿಯ ನಾಗಪಾತ್ರಿಗಳು ನಾಗಮಂಡಲವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸದ್ಗುರುಗಳು ಉಪಸ್ಥಿತರಿದ್ದು, ನಾಗನಿಗೆ ಆರತಿಯನ್ನು ಬೆಳಗಿದರು. ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಚ್‌.ಮುನಿಯಪ್ಪ, ಡಾ| ಎಂ.ಸಿ.ಸುಧಾಕರ್‌, ಕರ್ನಾಟಕದ ದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಸಹಿತ ಹಲವರು ಪಾಲ್ಗೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next