Advertisement

ನದಿ ಉಳಿವಿಗೆ ಪುನೀತ್‌ ಗಾನ

05:52 PM Aug 31, 2017 | Sharanya Alva |

ನದಿಗಳನ್ನು ಉಳಿಸಲು ಸದ್ಗುರು ಜಗ್ಗಿ ವಾಸುದೇವ್‌ ಅವರು ರಾಜ್ಯದಲ್ಲಿ ರ್ಯಾಲಿ ಹಮ್ಮಿಕೊಂಡಿರುವುದು ಎಲ್ಲರಿಗೂ ಗೊತ್ತು. ಅವರ ಈ ಕಾರ್ಯಕ್ಕೆ ಈಗಾಗಲೇ ಹಲವು ಕಲಾವಿದರು ಕೈ ಜೋಡಿಸಿದ್ದಾರೆ. ಈಗ ನಟ ಪುನೀತ್‌ ರಾಜ್‌ಕುಮಾರ್‌ ಕೂಡ “ನದಿ ಉಳಿಸಿ …’ ಎಂದು ಹಾಡುವ ಮೂಲಕ ಸಾಥ್‌ ನೀಡಿದ್ದಾರೆ.

Advertisement

ಹೌದು, ಪುನೀತ್‌ ರಾಜ್‌ಕುಮಾರ್‌ ಅವರು ನದಿಗಳನ್ನು ರಕ್ಷಿಸಿ ಎಂಬ ರ್ಯಾಲಿಗೆ ಜೈ ಎಂದಿದ್ದು, ಅದಕ್ಕೊಂದು ಹಾಡನ್ನೂ ಹಾಡಿದ್ದಾರೆ. ನಿರ್ದೇಶಕ ಸಂತೋಷ್‌ ಆನಂದರಾಮ್‌ ಅವರು ಬರೆದಿರುವ ಹಾಡಿಗೆ ಪುನೀತ್‌ ರಾಜಕುಮಾರ್‌ ಹಾಡಿದ್ದಾರೆ ಎಂಬುದು ವಿಶೇಷ. ಸುಮಾರು ಎರಡುವರೆ ನಿಮಿಷದ ಈ ಹಾಡು ಈಗ ಎಲ್ಲೆಡೆ ಮೊಳಗಿದೆ.

 “ಈ ನೆಲ, ಈ ಜಲ. ನಿರ್ಮಲ, ರಕ್ಷಣೆಯ ಹೊಣೆ ನಮ್ಮದು, ನದಿಗಳು ನಮಗೆ ಜೀವಜಲ. ರಕ್ಷಣೆಯ ಹೊಣೆ ನಮ್ಮದು. ನಮ್ಮ ನಾಳೆ ಸೌಖ್ಯಕ್ಕಾಗಿ, ನಮ್ಮ ಐಕ್ಯತೆ ಮಂತ್ರವಾಗಿ ಈ ದೇಶ ನಮ್ಮದು, ಈ ನಾಡು ನಮ್ಮದು ಕುಡಿಯುವ ಪ್ರತಿ ಹನಿ ಹನಿಯು ನಮ್ಮದು …’ ಎಂದು ಸಾಗುವ ಈ ಅರ್ಥಪೂರ್ಣ ಹಾಡು ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಈಗಾಗಲೇ ಈ ಹಾಡಿನ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಜೋರು ಸುದ್ದಿಯಾಗುತ್ತಿದೆ.

ಈ ಹಾಡಿನ ಕುರಿತು “ಉದಯವಾಣಿ’ ಜತೆ ಮಾತನಾಡಿದ ನಿರ್ದೇಶಕ ಸಂತೋಷ್‌ ಆನಂದರಾಮ್‌, “ಸೆಪ್ಟೆಂಬರ್‌ 9 ರಂದು ರ್ಯಾಲಿ ನಡೆಯುವ ಹಿನ್ನೆಲೆಯಲ್ಲಿಈಶ ಫೌಂಡೇಷನ್‌ ಸಂಯೋಜಿಸಿದ್ದ ರಾಗಕ್ಕೆ ಸಾಹಿತ್ಯ ಬರೆದಿದ್ದೇನೆ. ಅದಕ್ಕೆ ಅಪ್ಪು
ಸರ್‌ ಅವರೇ ಹಾಡಬೇಕು ಅಂತ ಹೇಳಿ, ಅವರಿಂದ ಹಾಡನ್ನು ಹಾಡಿಸಿ, ಆ ಮೂಲಕ ಜನರಿಗೆ ಜಾಗೃತಿ ಮೂಡಿಸುವ 
ಪ್ರಯತ್ನ ಮಾಡಲಾಗಿದೆ. ಇಂತಹ ಒಳ್ಳೆಯ ಕೆಲಸಕ್ಕೆ ಕೈ ಜೋಡಿಸಿದ್ದೇವೆ ಎಂಬ ಖುಷಿ ನನಗಿದೆ’ ಎನ್ನುತ್ತಾರೆ ಸಂತೋಷ್‌ ಆನಂದರಾಮ್‌. 

Advertisement

Udayavani is now on Telegram. Click here to join our channel and stay updated with the latest news.

Next