Advertisement

ಸೋರುತಿಹುದು ನಾಡಕಚೇರಿ ಮಾಳಿಗೆ

05:15 PM Nov 21, 2021 | Team Udayavani |

ಮಾಲೂರು: ಕಳೆದ ಎರಡು ದಿನಗಳಿಂದ ಟೇಕಲ್‌ ಸುತ್ತಮುತ್ತ ಮಳೆ ಆಗುತ್ತಿದ್ದು, ಕೆರೆ ಕುಂಟೆಗಳು ತುಂಬಿ ನೀರು ಹರಿಯುತ್ತಿದೆ. ಟೇಕಲ್‌ ನಾಡಕಚೇರಿಯು ಮಳೆಯಿಂದ ಶಿಥಿಲವಾಗಿದ್ದು, ಚಾವಣಿ ಕಿತ್ತುಹೋಗಿ ನೀರು ಸೋರಿಕೆ ಆಗುತ್ತಿದೆ. ಕಡತಗಳು ಸಂಗ್ರಹಿಸಿ ಇಡುತ್ತಿದ್ದ ಅಬಿಲೇಖಾಲಯದ ಎಲ್ಲಾ ಗೋಡೆ ನೀರು ಹಿಡಿದಿದೆ.

Advertisement

ಇಡೀ ಕಚೇರಿ ಜಲಾವೃತ ಗೊಂಡಿದೆ. ಈ ಹಿನ್ನೆಲೆಯಲ್ಲಿ ಕಂಪ್ಯೂಟರ್‌ ರೂಂನಿಂದ ಪಹಣಿ, ಇತರೆ ದಾಖಲೆ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾಡಕಚೇರಿ ಉಪತಹಶೀಲ್ದಾರ್‌ ಕಚೇರಿ ಬಳಿ ಮಳೆಯಿಂದ ಕಚೇರಿ ಶಿಥಿಲಗೊಂಡಿದ್ದು, ನ.20ರಂದು ಕೆಲಸ ಸ್ಥಗಿತಗೊಳಿಸಲಾಗಿದೆ ಎಂದು ಸೂಚನಾ ಫಲಕವನ್ನು ಲಗತ್ತಿಸಿ, ಕಚೇರಿಗೆ ಬೀಗ ಹಾಕಲಾಗಿದೆ. ರೈತರು ತಮ್ಮ ದಾಖಲೆಗಳು ಸಿಗದೆ ವಾಪಸ್ಸಾದರು.

ಇದನ್ನೂ ಓದಿ:- ಬೇಡಿಕೆ ಈಡೇರಿಕೆಗೆ ರೈತರ ಒತ್ತಾಯ

ಕಳೆದ ಎರಡು ತಿಂಗಳಿಂದಲೇ ಟೇಕಲ್‌ ನಾಡಕಚೇರಿಯು ಬಹುತೇಕ ಶಿಥಿಲಗೊಂಡಿತ್ತು. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ರೀತಿಯಾದ ಸಮಸ್ಯೆ ಎದುರಾಗುತ್ತಿದ್ದು, ಈ ಬಾರಿ ಇಡೀ ಕಟ್ಟಡ ನೀರು ಹಿಡಿದಿದೆ. ಕಂಪ್ಯೂಟರ್‌ ರೂಂನಲ್ಲಿ ವಿದ್ಯುತ್‌ ಸಂಪರ್ಕವಿಲ್ಲದ ಕಾರಣ, ತಕ್ಷಣ ಕಾರ್ಯ ಸ್ಥಗಿತಗೊಳಿಸಲಾಯಿತು.

Advertisement

ಕಚೇರಿಯ ಎಲ್ಲಾ ಕೊಠಡಿಗಳು ಮಳೆಯಿಂದ ನೆನೆಯುತ್ತಿದ್ದು, ಅಧಿ ಕಾರಿಗಳು ಕುಳಿತು ಕೆಲಸ ಮಾಡಲು ಸಹ ಸಾಧ್ಯವಾಗುತ್ತಿಲ್ಲ. ನಾಡಕಚೇರಿ ಉಪತಹಶೀಲ್ದಾರ್‌ ಜಗನ್ನಾಥರೆಡ್ಡಿ ಮಾತನಾಡಿ, ನಿರಂತರ ಮಳೆಗೆ ರೆಕಾರ್ಡ್‌ ರೂಮ್‌ ಸೋರಿಕೆ ಆಗುತ್ತಿದ್ದು, ಕಡತಗಳನ್ನು ಸಂರಕ್ಷಿಸಲು ಟಾರ್ಪಲ್‌ ಹಾಕಲಾಗಿದೆ.

ಕಂಪ್ಯೂಟರ್‌ ರೂಂನಲ್ಲಿ ನೀರು ಸುರಿಯುತ್ತಿರುವ ಕಾರಣ ಕರೆಂಟ್‌ ಶಾಕ್‌ ಹೊಡೆಯುತ್ತಿದ್ದು, ನಾಡಕ ಚೇರಿಯ ಕಾರ್ಯಚಟುವಟಿಕೆ ತಾತ್ಕಾಲಿಕ ಸ್ಥಗಿತ ಮಾಡಲಾಗಿದೆ ಎಂದು ಹೇಳಿದರು. ಮಳೆ ನಿಲ್ಲುವ ಸೂಚನೆ ನೋಡಿಕೊಂಡು ಶಿಥಿಲವಾದ ಕಡೆ ಸ್ವಲ್ಪಮಟ್ಟಿಗೆ ರೀಪೇರಿ ಮಾಡಿಕೊಂಡು ಮುಂದು ವರಿಸಲಾಗುತ್ತದೆ. ಕೆ.ಜಿ.ಹಳ್ಳಿ ಸರ್ವೆ ನಂ.10ರಲ್ಲಿ 20 ಗುಂಟೆ ಸ್ಥಳ ನಾಡಕಚೇರಿಗೆ ಮಂಜೂರು ಆಗಿದ್ದು, ಡೀಸಿ ಆದೇಶದಂತೆ ಶೀಘ್ರದಲ್ಲೆ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next