Advertisement

Nada: ಜೀವ ಬೆದರಿಕೆ ಪ್ರಕರಣ ದಾಖಲು

12:17 AM Aug 18, 2023 | Team Udayavani |

ಬೆಳ್ತಂಗಡಿ: ನಡ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಕೆಲಸದವರೊಂದಿಗೆ ತಮ್ಮ ಜಾಗಕ್ಕೆ ಬೇಲಿ ಹಾಕುತ್ತಿದ್ದ ವೇಳೆ ಆರೋಪಿಯೋರ್ವ ಆಗಮಿಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವ ಘಟನೆ ಆ. 15ರಂದು ನಡೆದಿದೆ.

Advertisement

ಘಟನೆಯ ಕುರಿತು ನಡ ಗ್ರಾಮ ನಿವಾಸಿ ಮಿನಿಪೌಲ್‌ ಅವರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಶ್ಯಾಮ್‌ ಸುಂದರ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಿದ್ದಾರೆ. ಆ. 10ರಂದು ಮಿನಿಪೌಲ್‌ ಅವರ ಕೆಲಸದವರು ಕೆಲಸ ಮಾಡುತ್ತಿದ್ದ ವೇಳೆ ಸ್ಥಳಕ್ಕಾಗಮಿಸಿದ ಆರೋಪಿ ನೀವು ಬೇಲಿ ನಿರ್ಮಿಸಿದರೆ ಜೆಸಿಬಿ ತಂದು ತೆರವು ಮಾಡುತ್ತೇನೆ ಎಂದು ಬೆದರಿಸಿ ಅಂಗಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಆ. 15ರಂದು ಮಿನಿಪೌಲ್‌ ಅವರು ಕಾರ್ಮಿಕರ ಜತೆ ಕೆಲಸ ಬೇಲಿ ನಿರ್ಮಾಣದ ಕೆಲಸ ಮಾಡುತ್ತಿದ್ದ ವೇಳೆ ಬಂದು ಮತ್ತೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದಾನೆ. ಘಟನೆಯ ಕುರಿತು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next