Advertisement

ಬಿಸಿಸಿಐ ವಿಶೇಷ ಸಭೆಯಲ್ಲಿ ವಿವಾದಿತ ಶ್ರೀನಿವಾಸನ್‌ ಭಾಗಿ  

07:55 AM Jul 27, 2017 | Team Udayavani |

ಚೆನ್ನೈ: ಸುಪ್ರೀಂ ಕೋರ್ಟ್‌ನಿಂದ ಅಮಾನತುಗೊಂಡಿರುವ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಮಾಜಿ ಅಧ್ಯಕ್ಷ ಎನ್‌.ಶ್ರೀನಿವಾಸನ್‌ ಬುಧವಾರ ನಡೆದ ಬಿಸಿಸಿಐ ಮಂಡಳಿ ವಿಶೇಷ ಸಭೆಯಲ್ಲಿ ಭಾಗವಹಿಸಿದರು. 

Advertisement

ಅವರು ತಮಿಳುನಾಡು ಕ್ರಿಕೆಟ್‌ ಸಂಸ್ಥೆಯನ್ನು ಪ್ರತಿನಿಧಿಸಿದ್ದರು. ಲೋಧಾ ಶಿಫಾರಸು ಜಾರಿಗೆ ತರುವ ಕುರಿತು ಚರ್ಚೆ ನಡೆಯಿತು. ಶ್ರೀನಿವಾಸನ್‌ ನಿಷೇಧದ ಹೊರತೂ ಸಭೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. 2013ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಲಕ ಅಳಿಯ ಗುರುನಾಥ್‌ ಮೈಯಪ್ಪನ್‌ ಬೆಟ್ಟಿಂಗ್‌ ಪ್ರಕರಣದಿಂದಾಗಿ ಶ್ರೀನಿವಾಸ್‌ ಕುರ್ಚಿ ಕಳೆದುಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next