Advertisement

Mysuru Dasara: ಅರಮನೆ ತಲುಪಿದ ಗಜಪಡೆ : ಭವ್ಯ ಸ್ವಾಗತ

01:39 AM Aug 24, 2024 | Team Udayavani |

ಮೈಸೂರು: ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ವಿವಿಧ ಆನೆ ಶಿಬಿರಗಳಿಂದ ಆಗಮಿಸಿ ರುವ ನಾಯಕ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಅರಮನೆಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

Advertisement

ಶುಕ್ರವಾರ ಬೆಳಗ್ಗೆ ಜಿಲ್ಲಾಡಳಿತ ಹಾಗೂ ಅರಮನೆ ಮಂಡಳಿಯಿಂದ ಗಜಪಡೆಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲಾಯಿತು. ಬುಧ ವಾರ ಸಂಜೆ ನಗ ರದ ಅರಣ್ಯಭವ ನಕ್ಕೆ ಆಗಮಿಸಿ ಅಲ್ಲಿಯೇ ಉಳಿದಿದ್ದ ಎಲ್ಲ ಆನೆ ಗಳು ಶುಕ್ರ ವಾರ ಬೆಳಗ್ಗೆ ಕಾಲ್ನಡಿಗೆಯಲ್ಲಿ ಅರಣ್ಯ ಭವನದಿಂದ ಹೊರಟು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬಂದು ನಿಂತವು.

ಚಿನ್ನದ ಅಂಬಾರಿ ಹೊರುವ ಅಭಿಮನ್ಯು, ಧನಂಜಯ, ಭೀಮ, ಹೊಸ ಆನೆ ಏಕಲವ್ಯ, ಕಂಜನ್‌, ಗೋಪಿ, ವರಲಕ್ಷ್ಮೀ, ಲಕ್ಷ್ಮೀ, ರೋಹಿತ ಆನೆಗಳಿಗೆ ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತರ ತಂಡ ಪಾದ ತೊಳೆದು, ಅರಿಶಿನ- ಕುಂಕುಮವಿಟ್ಟು, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ತಾಂಬೂಲ ನೀಡಿ ಪೂಜೆ ಸಲ್ಲಿಸಲಾಯಿತು. ಆನೆಗಳಿಗೆ ಪುಷ್ಪವೃಷ್ಟಿ ನಡೆಯಿತು. ಪೂಜೆ ಬಳಿಕ ಗಣ್ಯರಿಗೆ ಗೌರವ ವಂದನೆ ನಡೆಯಿತು.

ಶಾಸಕರಾದ ತನ್ವೀರ್‌ ಸೇಠ್‌, ಟಿ.ಎಸ್‌. ಶ್ರೀವತ್ಸ, ಕೆ.ಹರೀಶ್‌ಗೌಡ ಸೇರಿ ಜನಪ್ರತಿನಿಧಿಗಳು ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್‌.ಸಿ.ಮಹದೇವಪ್ಪ ಗೈರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next