Advertisement

ಭರಚುಕ್ಕಿ ಜಲಪಾತಕ್ಕೆ ಹಾರಿ ಮೈಸೂರಿನ ಯುವಕ ಆತ್ಮಹತ್ಯೆ

07:40 PM Jul 20, 2023 | Team Udayavani |

ಕೊಳ್ಳೇಗಾಲ: ಮೈಸೂರಿನ ಗಾಯತ್ರಿ ಪುರ೦ನ ಯುವಕನೋರ್ವ ಜೀವನದಲ್ಲಿ ಜಿಗುಪ್ಸೆಗೊಂಡು ಭರಚುಕ್ಕಿ ಜಲಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Advertisement

ಗಾಯತ್ರಿ ಪುರಂ ನಿವಾಸಿ ಸಾಗರ್ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ಯುವಕನ ತಂದೆ ಸೋಮನಾಥ್ ಅವರು, ಪುತ್ರ ಕೆಲಸ ಹುಡುಕಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೋದವ ಮರಳಿ ಬಂದಿಲ್ಲವೆಂದು ಹಾಲನಹಳ್ಳಿ ಪೊಲೀಸ್  ಠಾಣೆಗೆ ದೂರೊಂದನ್ನು ಜುಲೈ 17 ರಂದು ಸಲ್ಲಿಸಿದ್ದರು.

ಕಾಣೆಯಾಗಿದ್ದ ಯುವಕ ಭರಚುಕ್ಕಿ ಕಾವೇರಿ ನದಿಯಲ್ಲಿ ಶವವಾಗಿ ದೊರೆತಿದ್ದಾನೆ. ಮೃತ ಯುವಕ ಸಾಗರ್ ಎ೦ದು ಗುರುಸಿದ ಬಳಿಕ ವಾರಸುದಾರರಿಗೆ ಮಾಹಿತಿ ಪೊಲೀಸರು ನೀಡಿದ್ದಾರೆ.

ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಪೋಷಕರು ಗುರುತಿಸಿದ್ದು, ತಂದೆಯಿಂದ ದೂರು ಪಡೆದ ಗ್ರಾಮಾಂತರ  ಠಾಣೆಯ ಪಿಎಸ್ ಐ ಗಣೇಶ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next