Advertisement

Mysore; ಸಿಎಂ ತವರಲ್ಲಿ ಇಲಿ ಹೆಗ್ಗಣಗಳ ವಾಸಸ್ಥಾನವಾದ ಅಂಗನವಾಡಿ

12:28 PM Dec 07, 2023 | Team Udayavani |

ಮೈಸೂರು: ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿರುವ ಅಂಗನವಾಡಿ ಕೇಂದ್ರವೊಂದು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ಮುರಿದ ಗುಡಿಸಲಿನಲ್ಲಿ ಮಕ್ಕಳಿರಬೇಕಾದ ಪರಿಸ್ಥಿತಿಯಿದೆ.

Advertisement

ಮೈಸೂರಿನ ಬನ್ನಿಮಂಟಪದ ಎಲ್ಲಮ್ಮ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ನೆಲದ ಮಣ್ಣಿನಲ್ಲಿಯೇ ಆಡುವ ಮಕ್ಕಳು ಬಳಿಕ ಅಲ್ಲೇ ಆಹಾರ ಸೇವಿಸಬೇಕಾಗಿದೆ. ಸದ್ಯ ಜೋಪಡಿಯಂತಿದ್ದ ಗುಡಿಸಲ ನೆಲವನ್ನು ಇಲಿ, ಹೆಗ್ಗಣಗಳು ಕೊರೆದು ಹಾಕಿವೆ.

ಸುಮಾರು 60 ಮಕ್ಕಳ ಸಂಖ್ಯೆ ಬಲ ಹೊಂದಿರುವ ಅಂಗನವಾಡಿ ಕೇಂದ್ರಕ್ಕೆ ಪ್ರತಿ ನಿತ್ಯವೂ ಸುಮಾರು 25 ಮಕ್ಕಳು ಅಂಗನವಾಡಿಗೆ ಬರುತ್ತಿದ್ದಾರೆ. ಬಡವರ ಮಕ್ಕಳು ಬರುವ ಅಂಗನವಾಡಿ ಕೇಂದ್ರಕ್ಕೆ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕಾದ ಅಗತ್ಯವಿದೆ.

ಸ್ವಚ್ಛ ನಗರಿ ಎಂದು ಹೇಳುವ ಅಧಿಕಾರಿಗಳು, ಪಾಲಿಕೆ ಎಲ್ಲಮ್ಮ ಬಡಾವಣೆಯ ಸ್ಲಮ್ ನಲ್ಲಿರುವ ಈ ಗುಡಿಸಲು ಅಂಗನವಾಡಿ ಕೇಂದ್ರದತ್ತ ಗಮನ ಹರಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next