Advertisement

ಸ್ಯಾಂಟ್ರೋ ರವಿ ಬೆನ್ನು ಹತ್ತಿ ಹೆಬ್ರಿಗೆ ಬಂದ ಮೈಸೂರು ಪೊಲೀಸರು

04:38 PM Jan 12, 2023 | Team Udayavani |

ಉಡುಪಿ: ‘ಸ್ಯಾಂಟ್ರೋ ರವಿ’ಯ ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು ಉಡುಪಿ ಜಿಲ್ಲೆಯ ಹೆಬ್ರಿಯ ವ್ಯಕ್ತಿಯೊಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Advertisement

ಹೆಬ್ರಿಯಲ್ಲಿ ಬೀಡದಂಗಡಿ ನಡೆಸುತ್ತಿರುವ ರಮೇಶ್ ಅವರ ಕರೆಯ ಜಾಡು ಹಿಡಿದ ಮ್ಯೆಸೂರು ಪೊಲೀಸರು ಮಂಗಳವಾರ ಸಂಜೆ ವೇಳೆಗೆ ಮಫ್ತಿಯಲ್ಲಿ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ 200 ಯೂನಿಟ್ ಉಚಿತ ವಿದ್ಯುತ್ ‘ಬೇಜವಾಬ್ದಾರಿ ಮತ್ತು ತರ್ಕಹೀನ ಎಂದ ಸಿಎಂ

ಬಳಿಕ ರಮೇಶ್ ಅವರ ಮೊಬ್ಯೆಲ್ ಪಡೆದು ಕರೆಯ ಜಾಡು ಪರಿಶೀಲಿಸಿ ಹೆಚ್ಚಿನ ವಿಚಾರಣೆ ಮಾಡಿದ್ದಾರೆ. ಆದರೆ ಯಾವ ಕುರುಹೂ ಪತ್ತೆಯಾಗಿಲ್ಲ.

ರಮೇಶ್ ಅವರ ಮೊಬೈಲ್ ನಿಂದ ರವಿ ಆಪ್ತರಿಗೆ ಹೋಗಿರುವ ಹಿನ್ನೆಲೆಯಲ್ಲಿ ತನಿಖೆ ನಡೆದಿದೆ ಎಂದು ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next