Advertisement

ತ.ನಾಡಿನಲ್ಲಿ ಆನೆ ಹತ್ಯೆ ಖಂಡಿಸಿ ಮೈಸೂರು ಕನ್ನಡ ವೇದಿಕೆ ಧರಣಿ

05:55 PM Jan 31, 2021 | Team Udayavani |

ಮೈಸೂರು: ತಮಿಳುನಾಡಿನಲ್ಲಿ ಆನೆಯನ್ನು ಬೆಂಕಿಹಚ್ಚಿ ಕಗ್ಗೊಲೆ ಮಾಡಿದ್ದನ್ನು ಖಂಡಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

Advertisement

ಶನಿವಾರ ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನದ ಎದುರು ಅಣುಕು ಪ್ರದರ್ಶನ ಮಾಡಿದ ಪ್ರತಿಭಟನಾಕಾರರು, ಆನೆ ಹತ್ಯೆಗೆ ಕಾರಣರಾದ ಪಾತಕಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪ್ರವಾಸೋದ್ಯಮದ ಹೆಸರಿನಲ್ಲಿ ಅರಣ್ಯದಂಚಿನ ಗ್ರಾಮಗಳಲ್ಲಿ ರೆಸಾರ್ಟ್‌ ಸ್ಥಾಪಿಸಿ ದಂದೆ ಮಾಡುತ್ತಿರುವುದನ್ನು ನಿಲ್ಲಿಸಬೇಕೆಂದು ಒತ್ತಾಯಿದರು.

ಇದನ್ನೂ ಓದಿ:ಪೌರಕಾರ್ಮಿಕರಿಗೆ ಊಟ ಬಡಿಸಿದ ಸದಸ್ಯರು

ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್‌.ಬಾಲಕೃಷ್ಣ, ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್‌ ಬಾಬು, ಗೋಪಿ, ಕಾವೇರಿಯಮ್ಮ, ಮಾಲಿನಿ, ಸ್ವಾಮಿಗೈಡ್‌, ಬೀಡಾಬಾಬು, ಪರಿಸರ ಚಂದ್ರ, ಅರವಿಂದ, ಸುನೀಲ್‌, ಮಾದಪ್ಪ, ಎಲ್‌ಐಸಿ ಸಿದ್ದಪ್ಪ, ನಂಜರಾಜೇ ಅರಸ್‌, ಕೆಂಪೇಗೌಡ, ನಾಗರಾಜು, ಸತೀಶ್‌, ಮಹದೇವಸ್ವಾಮಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next