Advertisement

ದಸರಾ: ಆ.21ಕ್ಕೆ ಮೈಸೂರಿನತ್ತ ಗಜಪಯಣ?

02:55 PM Jul 31, 2023 | Team Udayavani |

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಯನ್ನು ಮೈಸೂರಿಗೆ ಕರೆತರಲು ಸಿದ್ಧತೆ ನಡದಿದೆ. ಆಗಸ್ಟ್‌ 21ರಂದು ಗಜಪಯಣ ನಡೆಸಲು ಚಿಂತನೆ ನಡೆಸಲಾಗಿದೆ.

Advertisement

ಈ ಸಂಬಂಧ ಸೋಮವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ದಸರಾ ಉನ್ನತ ಸಮಿತಿ ಸಭೆಯಲ್ಲಿ ಮಾಹಿತಿ ಹೊರ ಬೀಳಲಿದೆ. ದಸರಾ ಆಚರಣೆ ಮತ್ತು ಗಜಪಯಣ ಸಂಬಂಧ ಸೋಮವಾರ ಸಂಜೆ 4 ಗಂಟೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ದಸರಾ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ.

ಈ ವೇಳೆ ಗಜಪ ಯಣ ದಿನ ಮತ್ತು ಅಂದು ಕರೆತರುವ ಆನೆಗಳ ಬಗ್ಗೆ ಮಾಹಿತಿ ಹೊರ ಬೀಳಲಿದೆ. ಈಗಾಗಲೇ ದಸರಾ ಉತ್ಸವಕ್ಕೆ ಅಂಬಾರಿ ಆನೆ ಅಭಿ ಮನ್ಯು ನೇತೃತ್ವದಲ್ಲಿ 14 ಆನೆಗಳನ್ನು ಕರೆತರಲು ನಿರ್ಧರಿಸಿರುವ ಅರಣ್ಯ ಇಲಾಖೆ, ಮತ್ತಿಗೋಡು, ದುಬಾರೆ, ರಾಂಪುರ ಹಾಗೂ ಬಳ್ಳೆ ಸಾಕಾನೆ ಶಿಬಿರಗಳಿಗೆ ತೆರಳಿ ಒಂದು ಸುತ್ತಿನ ಆಯ್ಕೆ ಪ್ರಕ್ರಿಯೆ ನಡೆಸಿದೆ. ಜತೆಗೆ ಗಜ ಪಯಣದ ಮೂಲಕ ಮೈಸೂರಿಗೆ ಕರೆತರುವ ಮೊದಲ ತಂಡದ ಆನೆಗಳ ಪಟ್ಟಿ ಸಿದ್ಧಪಡಿಸಿದೆ.

21ಕ್ಕೆ ಗಜಪಯಣ?: ಅ.24ರಂದು ದಸರಾ ಜಂಬೂ ಸವಾರಿ ನಡೆಯಲಿದ್ದು, ಅದಕ್ಕಾಗಿ ಗಜಪಡೆಯನ್ನು ತಯಾರಿ ಮಡುವ ಸಲುವಾಗಿ ಎರಡು ತಿಂಗಳ ಮುಂಚಿತವೇ ಮೈಸೂರಿಗೆ ಕರೆತರುವುದು ವಾಡಿಕೆ. ಅದರಂತೆ ಈ ಬಾರಿಯೂ ಆಗಸ್ಟ್‌ ಕೊನೆ ವಾರ ಅಂದರೆ 21ರಂದು ನಾಗರಹೊಳೆ ಉದ್ಯಾ ನದಂಚಿನಲ್ಲಿರುವ ವೀರನಹೊಸಹಳ್ಳಿಯಲ್ಲಿ ಗಜಪಯಣ ನಡೆಸುವ ಮೂಲಕ 6ರಿಂದ 8 ಆನೆಗಳ ಮೊದಲ ತಂಡವನ್ನು ಕರೆತರಲು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.

ಅಂದು ವೀರನಹೊಸಹಳ್ಳಿಯಿಂದ ಬರುವ ಗಜಪಡೆಯ ಮೊದಲ ತಂಡ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ 3 ದಿನಗಳ ಕಾಲ ತಂಗಲಿವೆ. ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಸೌರಭ್‌ ಕುಮಾರ್‌ ನೇತೃತ್ವದಲ್ಲಿ ಆರ್‌ಎಫ್ಒ ಸಂತೋಷ್‌ಹೂಗಾರ್‌, ಪಶುವೈದ್ಯರಾದ ಡಾ. ರಮೇಶ್‌ ಮತ್ತು ಡಾ.ಮುಜೀಬ್‌ ತಂಡ ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಗೆ ಒಳಪಡುವ ಬಳ್ಳೆ, ಮತ್ತಿಗೋಡು, ದುಬಾರೆ ಆನೆ ಕ್ಯಾಂಪ್‌ ಹಾಗೂ ಬಂಡೀಪುರ ವ್ಯಾಪ್ತಿಯಲ್ಲಿರುವ ರಾಂಪುರ ಆನೆ ಶಿಬಿರಕ್ಕೆ ತೆರಳಿ ಅಂಬಾರಿ ಆನೆ ಅಭಿಮನ್ಯ ಸೇರಿ ದಸರಾ ಮಹೋತ್ಸವದಲ್ಲಿ ಕರೆತರಲು ಉದ್ದೇಶಿಸಿರುವ ಆನೆಗಳ ಸರ್ವಿಸ್‌ ಕಾರ್ಡ್‌ ಪರಿಶೀಲನೆ ನಡೆಸಿದ್ದಾರೆ.

Advertisement

ಈ ಬಾರಿಯ ದಸರಾ ಮಹೋತ್ಸವ ಆ.15ರಿಂದ ಆರಂಭ ವಾಗಲಿದ್ದು, 24ರಂದು ಜಂಬೂಸವಾರಿ ನೆರವೇರಲಿದೆ. ಈ ಹಿನ್ನೆಲೆ ಸಾಕಾನೆ ಶಿಬಿರಗಳಿಂದ 50 ದಿನಗಳ ಮುನ್ನವೇ ಆನೆಗಳನ್ನು ಮೈಸೂರಿಗೆ ತರಲಿದ್ದಾರೆ. 8 ಆನೆಗಳು ಬರುವ ಸಾಧ್ಯತೆ: ಈ ಬಾರಿಯ ಗಜಪ ಯಣದ ಮೂಲಕ ಮೊದಲ ತಂಡದಲ್ಲಿ 8 ಆನೆಗಳು ಬರುವ ಸಾಧ್ಯತೆಗಳಿದ್ದು, ಮತ್ತಿಗೋಡು ಶಿಬಿರದಿಂದ ಅಂಬಾರಿ ಆನೆ ಅಭಿಮನ್ಯು, ಭೀಮ, ಮಹೇಂದ್ರ, ಲಕ್ಷ್ಮೀ ಮತ್ತು ವರಲಕ್ಷ್ಮೀ. ಹಾಗೆಯೇ ಬಳ್ಳೆಯಿಂದ ಮಾಜಿ ಕ್ಯಾಪ್ಟನ್‌ ಅರ್ಜುನ, ದುಬಾರೆಯಿಂದ ಧನಂಜಯ ಮತ್ತು ಗೋಪಿ ಆನೆ ಕರೆತರಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next