Advertisement

ಮೈಸೂರು ದಸರಾ 2017: ಅರಮನೆ ಅಂಗಳಕ್ಕೆ ಗಜಪಯಣ

06:55 AM Aug 18, 2017 | Team Udayavani |

ಮೈಸೂರು: ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಗುರುವಾರ ಮಧ್ಯಾಹ್ನ ಅಂಬಾರಿ ಆನೆ ಅರ್ಜುನ ನೇತೃತ್ವದ 8 ಆನೆಗಳ ತಂಡವನ್ನು ಅರಮನೆಗೆ ಬರಮಾ ಡಿಕೊಳ್ಳುವುದರೊಂದಿಗೆ ಮೈಸೂರಿನಲ್ಲಿ ನಾಡಹಬ್ಬ ದಸರಾ ಸಡಗರ ಆರಂಭವಾಯಿತು.

Advertisement

ಇದೇ ಹೊತ್ತಿನಲ್ಲಿ, ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ನಿತ್ಯೋತ್ಸವ ಕವಿ ಡಾ.ಕೆ.ಎಸ್‌.ನಿಸಾರ್‌ ಅಹಮದ್‌ ಉದ್ಘಾಟಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪಪ್ರಕಟಿಸಿದರು. ಸೆಪ್ಟೆಂಬರ್‌ ಎರಡನೇ ವಾರದಲ್ಲಿ ನಿಸಾರ್‌ ಅಹಮದ್‌ ಅವರರಿಗೆ ದಸರಾ ಉದ್ಘಾಟನೆಗೆ ಆಗಮಿಸುವಂತೆ ಅಧಿಕೃತವಾಗಿ ಆಹ್ವಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ದಸರೆ ಎಂಬುದು ಧಾರ್ಮಿಕತೆ, ಜಾತಿ-ಮತ ಎಲ್ಲವನ್ನೂ ಮೀರಿ ದೇಶ-ವಿದೇಶಗಳ ಲಕ್ಷಾಂತರ ಜನರನ್ನು ಸೆಳೆಯುವ ಸಾಂಸ್ಕೃತಿಕ ಮಹಾ ಘಟನೆ.

Advertisement

Udayavani is now on Telegram. Click here to join our channel and stay updated with the latest news.

Next