Advertisement

ಜೂ. 30: ಮೈಸೂರು ಅಸೋಸಿಯೇಶನ್‌ 4 ಕೃತಿಗಳ ಅನಾವರಣ

04:45 PM Jun 27, 2018 | |

ಮುಂಬಯಿ: ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗ ಹಾಗೂ ಮೈಸೂರು ಅಸೋಸಿಯೇಶನ್‌ ಜಂಟಿ ಆಯೋಜನೆಯಲ್ಲಿ ನಾಲ್ಕು ಕೃತಿಗಳ ಬಿಡುಗಡೆ ಕಾರ್ಯಕ್ರಮ ಜೂ. 30 ರಂದು ಅಪರಾಹ್ನ 4.30 ರಿಂದ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್‌ನ ತಳಮಹಡಿಯಲ್ಲಿ ನಡೆಯಲಿದೆ.

Advertisement

ಕಾರ್ಯಕ್ರಮದಲ್ಲಿ ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ “ಓದು ಮುಗಿಸಿದ ಮೇಲೆ’, ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರ “ಸಮಾರಾಧನೆ’ ಹಾಗೂ ಲೇಖಕಿ, ಕವಿ ಡಾ| ದಾಕ್ಷಾಯಿಣಿ ಯಡಹಳ್ಳಿ ಇವರ “ವರ್ತುಲ’ ಮತ್ತು “ಅವ್ವಂದಿರ ಹಾಡುಗಳು’ ಕೃತಿಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಗುವುದು. 

ಮುಖ್ಯ ಅತಿಥಿಗಳಾಗಿ ಮೈಸೂರು ಅಸೋ ಸಿಯೇಶನ್‌ ಮುಂಬಯಿ ಮಹಿಳಾ ವಿಭಾಗದ ಅಧ್ಯಕ್ಷೆ    ಕೆ. ಕಮಲಾ, ನಗರದ ಹಿರಿಯ ಸಾಹಿತಿ   ಡಾ| ವಿಶ್ವನಾಥ್‌ ಕಾರ್ನಾಡ್‌, ನಗರದ ವಿಮರ್ಶಕ  ಡಾ|  ಕೆ. ರಘುನಾಥ್‌ ಅವರು ಆಗಮಿಸಲಿದ್ದಾರೆ.

ಡಾ| ಸುನೀತಾ ಎಂ. ಶೆಟ್ಟಿ 
ಮಂಬಯಿಯ ಹಿರಿಯ ಸಾಹಿತಿಯಾಗಿ ಜನ ಮನ್ನಣೆಯನ್ನು ಪಡೆದ ಪಡೆದ ಡಾ| ಸುನೀತಾ ಎಂ. ಶೆಟ್ಟಿ ಅವರು ಶಿಕ್ಷಕಿಯಾಗಿ, ಪ್ರಾಧ್ಯಾಪಕಿ ಆಗಿ ಒಳ್ಳೆಯ ವಾಗ್ಮಿಯಾಗಿ ಹೆಸರು ಮಾಡಿದ್ದಾರೆ. ತುಳು -ಕನ್ನಡ ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಅವರು, ಮಹಿಳೆಗೊಂದು ಸ್ವತಂತ್ರ ವ್ಯಕ್ತಿತ್ವ ಇರಬೇಕು. ಅದನ್ನು ಅವಳು ಬದುಕಿನಲ್ಲಿ ಉಳಿಸಿಕೊಳ್ಳಬೇಕು ಎಂಬುವುದನ್ನು ನಂಬಿ, ನೆಚ್ಚಿ, ಹಾಗೆ ನಡೆದು ಉನ್ನತ ವ್ಯಕ್ತಿತ್ವವನ್ನು ಗಳಿಸಿಕೊಂಡವರು. ಹೊಸ ವಿಚಾರ, ಹೊಸ ಚಿಂತನೆಗೆ ಸದಾ ತೆರೆದುಕೊಂಡು ಓಡಾಡುವ ಅವರು ಮುಂಬಯಿ ಕನ್ನಡಿಗರ ಅಕ್ಕರೆಯ ಅಕ್ಕನಾಗಿ, ಅಭಿಮಾನದ ಅಮ್ಮನಾಗಿ ಅಪಾರ ಮೆಚ್ಚುಗೆಯನ್ನು ಪಡೆದಿದ್ದಾರೆ.

ಅವರ ಸಾಹಿತ್ಯ ಶ್ರದ್ಧೆ ಕಾರ್ಯೋತ್ಸಾಹಕ್ಕೆ ಯಾರೂ ಬೇರಗಾಗಬೇಕು. ತಾವಾಯಿತು, ತಮ್ಮ ಸಾಹಿತ್ಯ ಕೃಷಿಯಾಯಿತು ಎಂದು ಅವರು ಸಮಾಜ ಸೇವೆಯಿಂದ ದೂರ ಉಳಿದವರಲ್ಲ. ಮುಂಬಯಿಯ ಅನೇಕ ಕಿರಿಯ ಪ್ರತಿಭಾವಂತ ಲೇಖಕರಲ್ಲಿ ಲೇಖನಿ ಹಿಡಿಯುವ ಧೈರ್ಯ ಮೂಡಿಸಿದ ಮುಂಬಯಿ ಕನ್ನಡಿಗರ ಶಕ್ತಿಯಾಗಿದ್ದಾರೆ. ನಾಗಸಂಪಿಗೆ, ಪಿಂಗಾರ, ಸಂಕ್ರಾಂತಿ, ಕರಜನ, ಪದಪಣ್‌ ಕಣ್ಣಾರೋ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಡಾ| ಸುನೀತಾ ಶೆಟ್ಟಿ ಅವರ ಕವನಗಳ ಧ್ವನಿ ಸುರುಳಿ ಮತ್ತು ಸಿಡಿಗಳು ಬಹಳ ಜನಪ್ರಿಯವಾಗಿವೆ. ಪೊಣ್ಣ ಮನಸ್‌Õ ಬೆಂಗ್‌ದ ಕಡಲ್‌ ಇದು ಸುನೀತಾ ಶೆಟ್ಟಿ ಅವರು ತುಳುವಿಗೆ ಅನುವಾದಿಸಿದ ನಾಟಕ. ಇತ್ತೀಚೆಗೆ ಹೃದಯ ಸಂವಾದ ಎಂಬ ಸದರ್ಶನ ಲೇಖನಗಳ ಸಂಗ್ರಹವನ್ನು, ಮೆರವಣಿಗೆ ಎಂಬ ಲೇಖನಗಳ ಸಂಪುಟವನ್ನು ಪ್ರಕಟಿಸಿದ್ದಾರೆ. ಮುಂಬಯಿಯ ಮಹಿಳಾ ಲೇಖಕಿಯನ್ನು ಸೃಜನಾ ವೇದಿಕೆಯಲ್ಲಿ ಒಂದುಗೂಡಿಸಿದ್ದಾರೆ. ಆಗಾಗ ವಿದೇಶ ಸಂದರ್ಶನ ಮಾಡಿ ಪ್ರವಾಸ ಲೇಖನಗಳನ್ನು ಬರೆದಿದ್ದಾರೆ. ಅವರ ಸಿದ್ಧಿ-ಸಾಧನೆಗಳಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ತುಳು ಮತ್ತು ಕನ್ನಡ ಭಾಷೆಗಳಲ್ಲಿ ಹಲವಾರು ಕೃತಿಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಅವರದ್ದಾಗಿದೆ.

Advertisement

ಡಾ| ದಾಕ್ಷಾಯಿಣಿ ಯಡಹಳ್ಳಿ 
ಮೂಲತಃ ಹುನಗುಂದಾದ ಚಿನ್ನಾಪೂರ ದವರಾದ ಇವರು ಬಿಎಸ್‌ಸಿ, ಎಂಎ, ಬಿಎಡ್‌ ಪದವಿ ಪಡೆ ದಿದ್ದು ಮುಲುಂಡ್‌ ವಿಪಿಎಂ ಶಿಕ್ಷಣ ಸಂಸ್ಥೆ ಯಲ್ಲಿ  ಇಂಗ್ಲಿಷ್‌ ಶಿಕ್ಷಕಿಯಾಗಿ, ಉಪ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದಾರೆ. ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಎಂಎ, ಎಂಫಿಲ್‌, ಪಿಎಚ್‌ಡಿ ಪದವಿಯನ್ನು ಪಡೆದಿರುವ ಇವರದ್ದು ಬಹುಮುಖ ಪ್ರತಿಭೆ. ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ಹಲವು ಲೇಖನಗಳನ್ನು ಬರೆದಿದ್ದಾರೆ. ಇವರ ಕತೆ, ಕವನ, ಲೇಖನಗಳು ನಾಡಿನ ಹಾಗೂ ನಗರದ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದಲ್ಲದೆ, ಕತೆ, ಕವನಗಳಿಗೆ ಬಹುಮಾನಗಳು ಲಭಿಸಿವೆ. ಇವರ ಬ್ರಹ್ಮಕಮಲ, ದಂತ ಪಂಕ್ತಿಯ ನಡುವೆ ಇನ್ನಿತರ ಹಲವಾರು ಕೃತಿಗಳು ಪ್ರಕಟವಾಗಿವೆ. 

Advertisement

Udayavani is now on Telegram. Click here to join our channel and stay updated with the latest news.

Next