Advertisement

ಹುಲಿ ಸೆರೆ ಹಿಡಿಯೋ ಕಾರ್ಯಾಚರಣೆಗೆ ಬಂದ ಆನೆಯೂ ನಾಪತ್ತೆ!

10:35 AM Dec 05, 2018 | Team Udayavani |

ಮೈಸೂರು:ಹುಲಿ ಹಿಡಿಯುವ ಕಾರ್ಯಾಚರಣೆಗೆ ತಂದಿದ್ದ ಆನೆಯೊಂದು ಪಟಾಕಿ ಶಬ್ದಕ್ಕೆ ಹೆದರಿ ಮಾವುತನನ್ನು ಕೆಳಕ್ಕೆ ಬೀಳಿಸಿ ಕಾಡಿನೊಳಗೆ ಓಡಿಹೋದ ಘಟನೆ ಎಚ್ ಡಿ ಕೋಟೆ ಸಮೀಪದ ಅಂತರ್ ಸಂತೆ ಗ್ರಾಮದಲ್ಲಿ ನಡೆದಿದೆ.

Advertisement

ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದ ಅರ್ಜುನ ಸೇರಿದಂತೆ ನಾಲ್ಕು ಆನೆಗಳನ್ನು ಬಳಸಿ ಅಂತರ್ ಸಂತೆ ಕಾಡಿನಲ್ಲಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಪಟಾಕಿ ಶಬ್ದಕ್ಕೆ ಏಕಾಏಕಿ ಹೆದರಿ ಹೋದ ಅಶೋಕ ಆನೆ ಕಾಡಿನೊಳಗೆ ಓಡಿ ಹೋಗಿತ್ತು.

ಇದೀಗ ಹುಲಿ ಹಿಡಿಯಲು ತಂದ ಆನೆಯೂ ನಾಪತ್ತೆಯಾಗಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕಂಗಾಲಾಗಿದ್ದಾರೆ. ಹುಲಿಯೂ ಹೋಯ್ತು, ಆನೆಯೂ ಓಡಿಹೋಯ್ತು. ಈಗ ಹುಲಿಯ ಬದಲು ಓಡಿ ಹೋದ ಆನೆಯನ್ನು ಹಿಡಿಯಲು ಮುಂದಾಗಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next