Advertisement

ಮೈಸೂರು: ಆಕ್ಸಿಜನ್ ಕೊರತೆಯಿಂದ ಪತ್ನಿ ಎದುರೇ ಪ್ರಾಣ ಬಿಟ್ಟ ವ್ಯಕ್ತಿ

02:31 PM May 13, 2021 | Team Udayavani |

ಮೈಸೂರು : ನಗರದ ಖಾಸಗಿ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಆಕ್ಸಿಜನ್ ಸಿಗದೆ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಶಿವಯ್ಯ  ಎಂದು ಹೇಳಲಾಗಿದೆ.

Advertisement

ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಶಿವಯ್ಯ ಮೈಸೂರಿನ ಅರವಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಇನ್ನು ಸ್ವಲ್ಪ ಹೊತ್ತಿನಲ್ಲೇ ಆಕ್ಸಿಜನ್ ಬರುತ್ತೆ ಅಂತಾ ಅಲ್ಲಿನ ವೈದ್ಯರು ಸಬೂಬು ಹೇಳುತ್ತಾ ಕಾಲಹರಣ ಮಾಡಿದ ಆರೋಪ ಕೇಳಿ ಬಂದಿದೆ.

ಆಕ್ಸಿಜನ್ ಸಿಗದೇ ತನ್ನ ಪತ್ನಿ ಎದುರೇ ಶಿವಯ್ಯ ಪ್ರಾಣ ಬಿಟ್ಟಿದ್ದಾರೆ. ಇವರು ಬಡವರಾಗಿದ್ದು, ಚಿಕಿತ್ಸೆಗಾಗಿ ಮನೆಯಲ್ಲಿದ್ದ ದನ, ಕುರಿ ಮಾರಿ 70 ಸಾವಿ ಹಣ ಪಾವತಿ ಮಾಡಲಾಗಿದೆಯಂತೆ.

ಆದ್ರೂ ಕೂಡ ಸದ್ಯ ಒಂದು ಲಕ್ಷ ಹಣ ನೀಡಿದರೆ ಮಾತ್ರ ಮೃತ ದೇಹವನ್ನು ಕೊಡುವುದಾಗಿ ಆಸ್ಪತ್ರೆಯವರು ಹೇಳುತ್ತಿದ್ದಾರೆ ಎಂದು ಶಿವಯ್ಯನ ಪತ್ನಿ ನೋವನ್ನು ತೋಡಿಕೊಂಡಿದ್ದಾರೆ.  ಹಣವಿಲ್ಲದೆ ಮೃತ ದೇಹವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಲು ಮೃತನ ಸಂಬಂಧಿಕರು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next