Advertisement

ಭಾರತಕ್ಕೆ ಓಡಿ ಬಂದ ಮ್ಯಾನ್ಮಾರ್‌ ಪೊಲೀಸ್‌

12:50 AM Mar 05, 2021 | Team Udayavani |

ನೇಪಿಟಾವ್‌ (ಮ್ಯಾನ್ಮಾರ್‌): ಗಮನಾರ್ಹ ಬೆಳವಣಿಗೆಯೊಂದರಲ್ಲಿ ಮ್ಯಾನ್ಮಾರ್‌ನ 19 ಪೊಲೀಸರು, ತಮ್ಮ ದೇಶದ ಗಡಿ ದಾಟಿ ಭಾರತಕ್ಕೆ ಆಗಮಿಸಿದ್ದಾರೆ. ಮ್ಯಾನ್ಮಾರ್‌ನೊಂದಿಗೆ ಅಷ್ಟು ಬಿಗಿಯಾದ ಗಡಿ ಬೇಲಿ ಹೊಂದಿರದ ಮಿಜೋರಾಂ ರಾಜ್ಯದ ಚಂಪಾಯ್‌ ಹಾಗೂ ಸೆರ್ಚಿಪ್‌ ಎಂಬ ಪ್ರಾಂತ್ಯಗಳಿಂದ ಭಾರತದೊಳಕ್ಕೆ ಆಗಮಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಅಲ್ಲಿ ನಡೆಯುತ್ತಿರುವ ದಂಗೆಗಳನ್ನು ನಿರ್ದಯವಾಗಿ ಹತ್ತಿಕ್ಕುವಂತೆ ಮ್ಯಾನ್ಮಾರ್‌ ಸೇನೆ ತಮಗೆ ನೀಡಿರುವ ಆದೇಶವನ್ನು ಪಾಲಿಸಲಾಗದ ಅಸಹಾಯಕತೆಯಿಂದಾಗಿ ಅವರು ಭಾರತಕ್ಕೆ ಓಡಿಬಂದಿದ್ದು, ಸದ್ಯದಲ್ಲೇ ತಮ್ಮನ್ನು ನಿರಾಶ್ರಿತರೆಂದು ಪರಿಗಣಿಸಬೇಕೆಂದು ಭಾರತವನ್ನು ಕೋರಲು ನಿರ್ಧರಿಸಿರುವುದಾಗಿ ಹೆಸರನ್ನು ಹೇಳಲು ಇಚ್ಛಿಸದ ಆ ಗುಂಪಿಗೆ ಸೇರಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತೂಂದೆಡೆ, ಮ್ಯಾನ್ಮಾರ್‌ನಲ್ಲಿ ಸೇನೆಯ ವಿರುದ್ಧ ನಡೆಯುತ್ತಿರುವ ದಂಗೆಗಳು ಮತ್ತಷ್ಟು ಪ್ರಕೋಪಕ್ಕೆ ಹೋಗಿವೆ. ಬುಧವಾರದಂದು ಸೇನೆ, ದಂಗೆಕೋರರ ಮೇಲೆ ಗುಂಡಿನ ದಾಳಿ ನಡೆಸಿತ್ತು. ಪ್ರಾಥಮಿಕ ವರದಿಗಳಲ್ಲಿ ಆ ದಾಳಿಯಲ್ಲಿ 10 ಜನರು ಸಾವಿಗೀಡಾಗಿದ್ದಾರೆಂದು ಹೇಳಲಾಗಿತ್ತು. ಆದರೆ  ಶುಕ್ರವಾರ ಬಂದ ವರದಿಗಳಲ್ಲಿ ಸೇನೆಯ ಗುಂಡಿನ ದಾಳಿಗೆ 38 ಜನರು ಸಾವಿಗೀಡಾಗಿರುವುದಾಗಿ ಉಲ್ಲೇಖವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next