Advertisement

ಮ್ಯಾನ್‌ಹೋಲ್‌ ದುರಂತ ಮೂವರ ಬಂಧನ 

12:08 PM Mar 14, 2017 | Team Udayavani |

ಬೆಂಗಳೂರು: ಕಗ್ಗದಾಸಪುರದ ಮ್ಯಾನ್‌ಹೋಲ್‌ನಲ್ಲಿ ಮೂವರು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾನ್‌ ಹೋಲ್‌ ನಿರ್ವಹಣೆ ಗುತ್ತಿಗೆ ಪಡೆದಿದ್ದ ರಾಮ್ಕಿ ಸಂಸ್ಥೆಯ ಮೂವರು ಸಿಬ್ಬಂದಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

Advertisement

ಮ್ಯಾನ್‌ ಹೋಲ್‌ ನಿರ್ವಹಣೆ ಗುತ್ತಿಗೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕೆ. ಬಾಬುರೆಡ್ಡಿ, ಉಪ ಗುತ್ತಿಗೆದಾರ ಮೇಮುಲ ಆಂಜನೇಯಲು, ಮ್ಯಾನೇಜರ್‌ ಎನ್‌. ಟಿ ರೆಡ್ಡಿ ಬಂಧಿತರು.

ಮಾರ್ಚ್‌7ರ ಮಧ್ಯರಾತ್ರಿ ಕಗ್ಗದಾಸಪುರ ಮುಖ್ಯರಸ್ತೆಯಲ್ಲಿರುವ ಮ್ಯಾನ್‌ ಹೋಲ್‌ ದುರಸ್ತಿ ಮಾಡಲು ಒಳಗೆ ಹೋಗಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ರಾಮ್ಕಿ ಕಂಪೆನಿ ಕಾರ್ಮಿಕರನ್ನು  ಮ್ಯಾನ್‌ಹೋಲ್‌ಗೆ ಇಳಿಸುವ ಮುನ್ನ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ದುರಂತಕ್ಕೆ ಕಾರಣವಾಗಿತು.

Advertisement

Udayavani is now on Telegram. Click here to join our channel and stay updated with the latest news.

Next