Advertisement

Kumble ದವಡೆ ಮುರಿದು ಬೌಲಿಂಗ್; ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡ ಪತ್ನಿ!

05:51 PM Jul 12, 2023 | Team Udayavani |

ಬೆಂಗಳೂರು: ವಿಶ್ವದ ಗಮನಸೆಳೆದಿದ್ದ 2002 ರಲ್ಲಿ ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದದ ಆಂಟಿಗುವಾ ಟೆಸ್ಟ್‌ನಲ್ಲಿ ಭಾರತದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಮುರಿದ ದವಡೆಯೊಂದಿಗೆ ಬ್ಯಾಂಡೇಜ್ ಮಾಡಿದ ಮುಖದೊಂದಿಗೆ ಆಡಲಿಳಿದುದ್ದನ್ನು ತಮಾಷೆ ಎಂದು ಅವರ ಪತ್ನಿ ಚೇತನಾ ಅವರು ಭಾವಿಸಿದ್ದರಂತೆ.

Advertisement

ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ಕುಂಬ್ಳೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಗಾಯಾಳಾಗಿಯೇ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ಅವರಂತಹವರಿಗೆ ಸವಾಲು ಹಾಕಲು ನಿರ್ಧರಿಸಿದ ಕ್ಷಣಗಳನ್ನು ಭಾರತದ ಸ್ಪಿನ್ ದಿಗ್ಗಜ ನೆನಪಿಸಿಕೊಂಡರು. 4 ರನ್ ಗಳಿಸಿದ್ದ ಲಾರಾ ಅವರನ್ನು ಕುಂಬ್ಳೆ ಎಲ್ ಬಿಡಬ್ಲ್ಯೂ ಮೂಲಕ ಔಟ್ ಮಾಡಿದ್ದರು. ಅದು ಪಂದ್ಯದಲ್ಲಿ ಅವರು ಪಡೆದ ಏಕೈಕ ವಿಕೆಟ್ ಆಗಿತ್ತು.

“ನಾನು ನನ್ನ ಹೆಂಡತಿ, ಚೇತನಾಳಿಗೆ ಕರೆ ಮಾಡಿ ಹೇಳಿದೆ, ನೋಡು ನಾನು ಮನೆಗೆ ಬರುತ್ತಿದ್ದೇನೆ, ನನಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದಿದ್ದೆ. ಕರೆ ಮುಗಿಸಿದ ಬಳಿಕ ನಾನು ಹೋಗಿ ಬೌಲ್ ಮಾಡುತ್ತೇನೆ ಎಂದು ಅವಳಿಗೆ ಹೇಳಿದ್ದೆ, ಆದರೆ ಬಹುಶಃ ನಾನು ತಮಾಷೆ ಮಾಡುತ್ತಿದ್ದೆ ಎಂದು ಅವಳು ಭಾವಿಸಿದ್ದಳು. ಅವಳು ಅದನ್ನು ಗಂಭೀರವಾಗಿ ತೆಗೆದುಕೊಂಡಳು ಎಂದು ನಾನು ಭಾವಿಸುವುದಿಲ್ಲ. ದವಡೆ ಮುರಿದ ನಂತರವೂ ತಂಡಕ್ಕೆ ಕೆಲವು ವಿಕೆಟ್‌ಗಳನ್ನು ಪಡೆಯುವುದು ನನ್ನ ಜವಾಬ್ದಾರಿ ಎಂದು ಭಾವಿಸಿದ್ದೆ ಎಂದು ಭಾರತದ ಮಾಜಿ ನಾಯಕ ಹೇಳಿದರು.

“ನಾನು ಡ್ರೆಸ್ಸಿಂಗ್ ರೂಮ್ ಗೆ ಹಿಂತಿರುಗಿದಾಗ, ಸಚಿನ್ ಬೌಲಿಂಗ್ ಮಾಡುವುದನ್ನು ನಾನು ನೋಡಿದೆ. ವೇವೆಲ್ ಹಿಂಡ್ಸ್ ಆಡುತ್ತಿದ್ದರು ಎಂದು ನಾನು ಭಾವಿಸುತ್ತೇನೆ ಬೇರೊಬ್ಬ ಬ್ಯಾಟ್ಸ್ ಮ್ಯಾನ್ ನನಗೆ ನೆನಪಿಲ್ಲ” ಎಂದು ಕುಂಬ್ಳೆ ಹೇಳಿದರು.

”ಇದು ನನ್ನ ಅವಕಾಶ ಎಂದು ನಾನು ಭಾವಿಸಿದೆ. ನಾನು ಹೋಗಿ ಒಂದೆರಡು ವಿಕೆಟ್‌ಗಳನ್ನು ಪಡೆಯಬೇಕು. ನಾವು ಎರಡು ಅಥವಾ ಮೂರನೇ ದಿನದ ಅಂತ್ಯಕ್ಕೆ ವೆಸ್ಟ್ ಇಂಡೀಸ್ ನ ಮೂರು ಅಥವಾ ನಾಲ್ವರನ್ನು ಔಟಾಗಿಸಲು ಸಾಧ್ಯವಾದರೆ, ನಮಗೆ ಪಂದ್ಯವನ್ನು ಗೆಲ್ಲುವ ಅವಕಾಶವಿದೆ ಅಂದುಕೊಂಡೆ. ಫಿಸಿಯೋ ಥೆರಪಿಸ್ಟ್ ಆಂಡ್ರ್ಯೂ ಲೈಪಸ್ ಅವರಿಗೆ ನನ್ನನ್ನು ಮೈದಾನಕ್ಕೆ ಹೋಗಲು ಅವಕಾಶ ಮಾಡಿಕೊಡಲು ಹೇಳಿದೆ.

Advertisement

ಶಸ್ತ್ರಚಿಕಿತ್ಸೆಗಾಗಿ ಮರುದಿನ ಬೆಂಗಳೂರಿಗೆ ಹಿಂತಿರುಗಬೇಕಿತ್ತು, ಆ ಸಮಯದಲ್ಲಿ ನಾನು ಕನಿಷ್ಠ ನನ್ನ ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ ಎಂಬ ಆಲೋಚನೆಯೊಂದಿಗೆ ಮನೆಗೆ ಹೋಗಬಹುದು ಎಂದು ಹೇಳಿದ್ದೆ ಅಂದರು.

7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕುಂಬ್ಳೆ ಅವರು ಮರ್ವಿನ್ ದಿಲ್ಲನ್ ಶಾರ್ಟ್ ಬಾಲ್ ಗೆ ಗೊಂಡು ರಕ್ತವನ್ನು ಉಗುಳಿದರು ಆದರೆ ಎರಡು ದಶಕಗಳ ಹಿಂದೆ ಆ ಸರಣಿಯ ನಾಲ್ಕನೇ ಟೆಸ್ಟ್‌ನಲ್ಲಿ ಇನ್ನೂ 20 ನಿಮಿಷಗಳ ಕಾಲ ಬ್ಯಾಟ್ ಮಾಡಿದ್ದರು.

ಸ್ಮರಣೀಯ ವೃತ್ತಿಜೀವನದಲ್ಲಿ ಅವರು ಬೌಲಿಂಗ್ ಮಾಡಿದ ಕಠಿಣ ಬ್ಯಾಟ್ಸ್ ಮ್ಯಾನ್ ಗಳ ಬಗ್ಗೆ ಕೇಳಿದಾಗ, ಅವರು ಲಾರಾ, ಸಯೀದ್ ಅನ್ವರ್, ಕಾಲಿಸ್ ಮತ್ತು ಅರವಿಂದ ಡಿ ಸಿಲ್ವಾ ಅವರ ಹೆಸರು ಹೇಳಿದರು.

ಕುಂಬ್ಳೆ ಗಾಯಾಳಾಗಿ ಆಡಿದ ಪಂದ್ಯದಲ್ಲಿ ಭಾರತ 513/9 ಡಿಕ್ಲೆರ್ ಮಾಡಿಕೊಂಡಿತ್ತು, ವೆಸ್ಟ್ ಇಂಡೀಸ್ 629/9 ಡಿಕ್ಲೆರ್ ಮಾಡಿಕೊಂಡಿತ್ತು. ಪಂದ್ಯ ಡ್ರಾ ಆಗಿತ್ತು.

ಜುಲೈ 12 ರಿಂದ ಪ್ರಾರಂಭವಾಗುವ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಪೈಪೋಟಿ ನಡೆಸಲಿದ್ದು, ಎರಡು ತಂಡಗಳು ಕೆಂಪು-ಚೆಂಡಿನ ಕ್ರಿಕೆಟ್‌ನಲ್ಲಿ ಎರಡು ಪಂದ್ಯಗಳ ಸರಣಿ ಆಡಲಿವೆ.

Advertisement

Udayavani is now on Telegram. Click here to join our channel and stay updated with the latest news.

Next