Advertisement

ಮೊಳಕಾಲ್ಮೂರಲ್ಲಿ ನನ್ನ ಗೆಲುವು ಶತಃಸಿದ್ಧ: ಶ್ರೀರಾಮುಲು

12:55 PM May 04, 2018 | |

ನಾಯಕನಹಟ್ಟಿ: ಮೊಳಕಾಲ್ಮೂರು ಕ್ಷೇತ್ರದಲ್ಲಿ ನಾನು ಗೆಲುವು ಸಾಧಿಸುವುದು ನಿಶ್ಚಿತ ಎಂದು ಬಿಜೆಪಿ ಅಭ್ಯರ್ಥಿ, ಬಳ್ಳಾರಿ ಸಂಸದ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು. ಸಮೀಪದ ಎನ್‌. ಮಹದೇವಪುರ ಗ್ರಾಮದಲ್ಲಿ ಬುಧವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ಕಳೆದ ಬಾರಿ ಇಲ್ಲಿನ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಬಿಎಸ್ಸಾರ್‌ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದರು. ಈ ಬಾರಿಯೂ ಜನರಿಂದ ಭಾರೀ ಪ್ರಮಾಣದ ಬೆಂಬಲ ವ್ಯಕ್ತವಾಗಿದೆ. ಹಾಗಾಗಿ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.

Advertisement

ಕ್ಷೇತ್ರದ ಜನರ ಕುಡಿಯುವ ನೀರಿನ ಹಾಗೂ ಅಂತರ್ಜಲದ ಸಮಸ್ಯೆಯ ಬಗ್ಗೆ ಅರಿವಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ಇಲ್ಲಿನ ಕೆರೆಗಳಿಗೆ ನೀರು ಹರಿಸುವುದು ಪ್ರಮುಖವಾದ ಗುರಿ. ಕಾಂಗ್ರೆಸ್‌ ಸರಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ಎ ಹಾಗೂ ಬಿ ಸ್ಕೀಂ ಎಂದು ವಿಂಗಡಿಸಿದೆ. ಆದರೆ ಎ ಸ್ಕೀಂ ಮುಕ್ತಾಯಗೊಳ್ಳಲು ಎಷ್ಟು ವರ್ಷ ಬೇಕಾಗುತ್ತದೆ ಎಂಬುದಕ್ಕೆ ಉತ್ತರವಿಲ್ಲ. ಬಿ ಸ್ಕೀಂ ಆರಂಭದ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಈ ಗೊಂದಲಗಳಿಂದಾಗಿ ಯೋಜನೆ ಕುಂಟುತ್ತಾ ಸಾಗಿದೆ. ಬಿಜೆಪಿ ಸರಕಾರ ಅಸಇತ್ವಕ್ಕೆ4 ಬಂದ ತಕ್ಷಣ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಭೀಮಗೊಂಡನಹಳ್ಳಿ, ಜೋಗಿಹಟ್ಟಿ, ಗೌಡಗೆರೆ, ಮಲ್ಲೂರಹಳ್ಳಿ, ಎನ್‌. ಮಹದೇವಪುರ ಗ್ರಾಮಗಳಲ್ಲಿ ಜನರು ಶ್ರೀರಾಮುಲು ಆಗಮನಕ್ಕೆ ತಡರಾತ್ರಿವರೆಗೆ ಕಾದಿದ್ದರು. ಎನ್‌. ಮಹಾದೇವಪುರ ಗ್ರಾಮ ತಲುಪಿದಾಗ ರಾತ್ರಿ 11 ಗಂಟೆಯಾಗಿತ್ತು. ಜನರು ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತ ನೀಡಿದರು. ಬಿಜೆಪಿ ಮಂಡಲಾಧ್ಯಕ್ಷ ಎಂ.ವೈ.ಟಿ. ಸ್ವಾಮಿ, ಕಾರ್ಯದರ್ಶಿ ಶಿವಣ್ಣ, ಸಿ.ಬಿ. ಮೋಹನ್‌, ಪರಮೇಶ್‌, ಗೋವಿಂದ್‌, ಮಸಿಯಪ್ಪ, ಪಿ.ಬಿ. ತಿಪ್ಪೇಸ್ವಾಮಿ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next