Advertisement

ನನ್ನ ಹೇಳಿಕೆಗಳನ್ನು ತಿರುಚಲಾಗಿದೆ: ಮಾದ್ಯಮಗಳ ವಿರುದ್ಧ ಸಚಿವ ಈಶ್ವರಪ್ಪ  ಗರಂ

06:46 PM Sep 30, 2019 | Team Udayavani |

ಶಿವಮೊಗ್ಗ : ನನ್ನ ಹೇಳಿಕೆಯನ್ನು ಮಾದ್ಯಮಗಳು ತಿರುಚಿ ಸುದ್ದಿ ಮಾಡಿವೆ. ಯುಟಿ ಖಾದರ್ ವಿಚಾರದಲ್ಲಿ ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದೇನೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ನಾನು ಸಂಘಟನೆಗಿಂತ ದೊಡ್ಡದು ಯಾವುದು ಇಲ್ಲ ಎಂದು ಹೇಳಿಕೆ ಕೊಟ್ಟಾಗ  ಯಡಿಯೂರಪ್ಪ ರ ಹೆಸರನ್ನು ಹೇಳಿದ್ದು ನಿಜ ಈ ಬಗ್ಗೆ ಮಾಧ್ಯಮಗಳು ಸಿದ್ದರಾಮಯ್ಯ, ಕುಮಾರಸ್ವಾಮಿ ಹೆಸರುಗಳನ್ನು ಬಿಟ್ಟು ಯಡಿಯೂರಪ್ಪ ರವರ ಹೆಸರನ್ನು ಮಾತ್ರ ಪ್ರಸ್ತಾಪ ಮಾಡಿವೆ ಎಂದು ಹೇಳಿದರು.

ನಂತರ ಮುಂದುವರೆದು ಮಾತಾನಾಡಿದ ಅವರು  ನನ್ನ ಹಾಗೂ ಯಡಿಯೂರಪ್ಪರನ್ನು ಬೇರೆ ಮಾಡಲು ಯಾರಿಂದಲೂ ಸಾದ್ಯವಿಲ್ಲ. ಚುನಾವಣೆ ನಡೆದರೇ 150 ಕ್ಕೂ ಅಧಿಕ ಸ್ಥಾನವನ್ನು ನಾವು ಗೆಲ್ಲಲಿದ್ದೇವೆ. ಬಿಎಸ್ ವೈ ಹಾಗೂ ಸಂಘಟನೆ ನೇತೃತ್ವದಲ್ಲಿ ಮತ್ತೇ ಅಧಿಕಾರದ  ಚುಕ್ಕಾಣಿ ಹಿಡಿಯುತ್ತೇವೆ ಎಂದು ಹೇಳಿದರು.

ಈಗಿರುವ ಖಾತೆ ಹೆಚ್ಚು ಜವಾಬ್ದಾರಿ ಇರುವಾಗ ಮತ್ತೊಂದು ಖಾತೆ ನಿರ್ವಹಣೆ ಕಷ್ಟಸಾಧ್ಯ. ಈ ಹಿನ್ನಲೆಯಲ್ಲಿ ಸಿಎಂ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎನ್ನುಚ ಪ್ರಕ್ರಿಯೆಯನ್ನು ಕೊಟ್ಟಿದೆ. ಆದರೆ ಮಾಧ್ಯಮಗಳು ಈ ಹೇಳಿಕೆಯನ್ನು ತಿರುಚಿ ವರದಿ ಮಾಡಿವೆ ಎಂದರು. ಸಿಎಂ ಬಯಸಿದರೆ ಕ್ರೀಡಾ ಖಾತೆಯಲ್ಲಿ ಮುಂದುವರೆಯುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next