Advertisement

ಮೇ 13ರಂದು ನನ್ನ ಮಗನೇ CM: ದೇವೇಗೌಡರ “ವಿಶ್ವಾಸ”ದ ಮಾತು

11:18 PM Apr 30, 2023 | Team Udayavani |

ಚನ್ನಪಟ್ಟಣ: “ಮೇ 10ರಂದು ನನ್ನ ಮಗ ಎಚ್‌.ಡಿ. ಕುಮಾರಸ್ವಾಮಿಯವರನ್ನು ಗೆಲ್ಲಿಸಿ. 13ರಂದು ಅವರು ಮುಖ್ಯಮಂತ್ರಿ ಆಗಲಿದ್ದಾರೆ” – ಇದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ “ಸ್ಪಷ್ಟ” ನುಡಿ. ರವಿವಾರ ಬೊಂಬೆನಾಡು ಚನ್ನಪಟ್ಟಣದಲ್ಲಿ ಜೆಡಿಎಸ್‌ ಪಕ್ಷದ ಪರ ಚುನಾವಣ ಪ್ರಚಾರಕ್ಕಿಳಿದ ದೊಡ್ಡಗೌಡರು, ತಮ್ಮ ಮಗ ಕುಮಾರಸ್ವಾಮಿಯವರು ಸಿಎಂ ಆಗಿಯೇ ಆಗುತ್ತಾರೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

Advertisement

ಚನ್ನಪಟ್ಟಣದ ಇಗ್ಗಲೂರು ಗ್ರಾಮದಲ್ಲಿ ಎಚ್‌ಡಿಕೆ ಪರವಾಗಿ ಚುನಾವಣ ಪ್ರಚಾರ ನಡೆಸಿ ಮಾತನಾಡಿದ ಅವರು, “ಈ ರಾಜ್ಯದಲ್ಲಿ ಬಡವರ ಪರ ಇರುವ ರಾಜಕಾರಣಿ ಒಬ್ಬರೇ ಒಬ್ಬರು. ಅದೆಂದರೆ  ಕುಮಾರಸ್ವಾಮಿ ಮಾತ್ರ. ಹಾಗಾಗಿ ಈ ಬಾರಿ ಅವರಿಗೆ ನೀವು ಆಶೀರ್ವಾದ ಮಾಡಬೇಕು. ಚನ್ನಪಟ್ಟಣ ನಮಗೆ ಕರ್ಮಭೂಮಿ. ಇದೇ 10ರಂದು ಅವರನ್ನು ನೀವು ಗೆಲ್ಲಿಸಿ, 13ಕ್ಕೆ ಅವರು ಸಿಎಂ ಆಗುತ್ತಾರೆ” ಎಂದು ಹೇಳಿದರು.

ಇದೇ ವೇಳೆ, ದಿಲ್ಲಿಯಲ್ಲಿ ರಾಜ್ಯದ ಅನ್ನದಾತರ ಪರ ಹೋರಾಡಿದ್ದು ಜೆಡಿಎಸ್‌ ಪಕ್ಷವೇ ಹೊರತು ಬೇರಾರೂ ಅಲ್ಲ. ಜೆಡಿಎಸ್‌ನ ಹೋರಾಟದ ಫ‌ಲವಾಗಿ ಇಂದು ರೈತರು ಸುಗಮ ಜೀವನ ನಡೆಸುವಂತಾಗಿದೆ ಎಂದೂ ದೇವೇಗೌಡರು ನುಡಿದರು.

ಪ್ರಧಾನಿ ಬರುವ ಮುನ್ನವೇ ಗೌಡರ ಪ್ರವೇಶ

ಪ್ರಧಾನಿ ಮೋದಿಯವರು ರವಿವಾರ ಕೋಲಾರ ಸಮಾವೇಶದಲ್ಲಿ ಪಾಲ್ಗೊಂಡು ಚನ್ನಪಟ್ಟಣಕ್ಕೆ ಬರುವ ಮುನ್ನವೇ ಇಗ್ಗಲೂರಿಗೆ ಬರುವ ಮೂಲಕ ದೇವೇಗೌಡರು ಬಿಜೆಪಿಗೆ ಠಕ್ಕರ್‌ ನೀಡಿದ್ದು ಕಂಡುಬಂತು. ಹೆಲಿಕಾಪ್ಟರ್‌ ಮೂಲಕ ಸಮಾವೇಶ ಸ್ಥಳಕ್ಕೆ ಬಂದ ಅವರು, ಪುತ್ರನ ಪರ ಭರ್ಜರಿ ಪ್ರಚಾರ ನಡೆಸಿ ಹಿಂದಿರುಗಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next