Advertisement

ಕೋಮುವಾದವನ್ನು ಮೆಟ್ಟಿ ನಿಂತ ಕರಾವಳಿಗರಿಗೆ ನನ್ನ ಸೆಲ್ಯೂಟ್‌!

11:51 AM Apr 27, 2018 | |

ಮಂಗಳೂರು: ‘ಬಿಜೆಪಿ ಮತ್ತು ಸಂಘ ಪರಿವಾರದವರು ಕರಾವಳಿಯನ್ನು ಪ್ರಯೋಗ ಶಾಲೆ ಮಾಡಲು ಹೊರಟಿದ್ದರು. ಆದರೆ ಕೋಮುವಾದವನ್ನು ಮೆಟ್ಟಿ ನಿಂತ ಕರಾವಳಿಯ ಜನರಿಗೆ ನನ್ನ ಸೆಲ್ಯೂಟ್‌’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

Advertisement

ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಬಿಡುಗಡೆಯ ಬಳಿಕ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನುದ್ದೇಶಿ ಮಾತನಾಡುವ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.

‘ಬೇರೆ ಬೇರೆ ಕಾರಣಗಳಿಂದ ಹತ್ಯೆಗೀಡಾದವರನ್ನು ನಮ್ಮ ಕಾರ್ಯಕರ್ತರು ಎಂದು ಹೇಳುವ ಮೂಲಕ ಬಿಜೆಪಿಯವರು ಕೋಮು ಬಣ್ಣ ಕಟ್ಟಿ ಲಾಭ ಪಡೆಯಲು ಯತ್ನಿಸಿದರು. ವಿವಿಧ ಸಂಘಟನೆಗಳಲ್ಲಿದ್ದ 11 ಕಾರ್ಯಕರ್ತರು ಹತ್ಯೆಗೀಡಾಗಿದ್ದರು ಆದರೆ ಬಿಜೆಪಿಯವರು 23 ಮಂದಿ ಹತ್ಯೆಗೀಡಾಗಿದ್ದಾರೆ ಎಂದರು. ಮುನುಷ್ಯರು ಮಾಡುವ ಕೆಲಸವಾ ಇದು’ ಎಂದು ಪ್ರಶ್ನಿಸಿದರು.

‘ಕಳೆದ ಬಾರಿ ಬಿಜೆಪಿಗೆ ಪಾಠ ಕಲಿಸಿದ್ದೀರಿ. ಕರಾವಳಿ ಭಾಗದ 19 ಸ್ಥಾನಗಳ ಪೈಕಿ 13 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲ್ಲಿಸಿದ್ದೀರಿ. ಬಿಜೆಪಿ ಗೆದ್ದಿದ್ದು ನಾಲ್ಕು ಸ್ಥಾನಗಳು (ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ಸೇರಿ ) ಮಾತ್ರ. ಕೋಮುವಾದಿಗಳಿಗೆ ತಕ್ಕ ಪಾಠ ಮಾಡಿದ್ದೀರಿ. ಈ ಬಾರಿ ಎಲ್ಲಾ ಸ್ಥಾನಗಳನ್ನು ಗೆದ್ದು ಕೋಮುವಾದ ಕಿತ್ತೋಗೆಯಬೇಕು’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next