Advertisement

ನನ್ನ ಪಾತ್ರ ಈಗ ಕೇವಲ ಕಲಿಯುವುದು, ಸಹಕರಿಸುವುದು: ಪ್ರಶಾಂತ್‌ ಕಿಶೋರ್‌ ಖೇದ

09:58 AM Mar 30, 2019 | Team Udayavani |

ಪಟ್ನಾ : ಬಿಹಾರ ಲೋಕಸಭಾ ಚುನಾವಣೆಯಲ್ಲಿ ಯಾವುದೇ ರಣತಂತ್ರಗಾರಿಕೆಯ ಜವಾಬ್ದಾರಿಯನ್ನು ತನಗೆ ಕೊಡದಿರುವುದಕ್ಕೆ ನಿರಾಶರಾಗಿರುವ ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್‌ ಕಿಶೋರ್‌, “ಇದು ನನ್ನ ರಾಜಕೀಯ ವೃತ್ತಿ ಬದುಕಿನ ಆರಂಭವಷ್ಟೇ; ಆದುದರಿಂದ ಈಗ ನನ್ನ ಪಾತ್ರ ಕಲಿಯುವುದು ಮತ್ತು ಸಹಕರಿಸುವುದಷ್ಟೇ ಆಗಿದೆ’ ಎಂದು ಇಂದು ಶುಕ್ರವಾರ ಖೇದದಿಂದ  ಹೇಳಿದ್ದಾರೆ.

Advertisement

2014ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುವಂತೆ ಮಾಡುವಲ್ಲಿ ಯಶಸ್ವೀ ರಣತಂತ್ರ ಹೆಣೆದು ಪ್ರಸಿದ್ದಿಗೆ ಬಂದಿದ್ದ ಪ್ರಶಾಂತ್‌ ಕಿಶೋರ್‌ ಅವರನ್ನು ಜೆಡಿಯು ಮುಖ್ಯಸ್ಥ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಿದ್ದರು.

”ಮೋದಿ ಮತ್ತು ನಿತೀಶ್‌ ನಾಯಕತ್ವದಡಿ ಬಿಹಾರದಲ್ಲಿ ಎನ್‌ಡಿಎ ಬಲವಾದು ಹೋರಾಟ ಮಾಡುತ್ತಿದೆ. ಇದರ ಹೊಣೆಗಾರಿಕೆಯನ್ನು ಆರ್‌ ಸಿ ಪಿ ಸಿಂಗ್‌ ವಹಿಸಿಕೊಂಡಿದ್ದಾರೆ. ನಾನೀಗ ನನ್ನ ರಾಜಕೀಯ ವೃತ್ತಿ ಬದುಕಿನ ಆರಂಭಿಕ ಹಂತದಲ್ಲಿದ್ದೇನೆ; ಆದುದರಿಂದ ಈಗ ನನ್ನ ಪಾತ್ರ ಕಲಿಯುವುದು ಮತ್ತು ಸಹಕರಿಸುವುದಷ್ಟೇ ಆಗಿದೆ” ಎಂದು ಪ್ರಶಾಂತ್‌ ಕಿಶೋರ್‌ ಇಂದು ಶುಕ್ರವಾರ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next