Advertisement

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

01:49 AM Apr 28, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅಬಕಾರಿ ನೀತಿ ಹಗರಣದ ಕಿಂಗ್‌ಪಿನ್‌ ಮತ್ತು ಮುಖ್ಯ ಪಿತೂರಿಗಾರ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಸುಪ್ರೀಂ ಕೋರ್ಟ್‌ಗೆ ಅಫಿದ ವಿತ್‌ ಸಲ್ಲಿಸಿದ ಬೆನ್ನಲ್ಲೇ ಕೋರ್ಟ್‌ಗೆ ಪ್ರತಿಕ್ರಿಯೆ ಸಲ್ಲಿಸಿರುವ ಕೇಜ್ರಿವಾಲ್‌, ಕೇಂದ್ರ ಸರಕಾರದ ಅಧಿಕಾರದ ದುರುಪಯೋಗಕ್ಕೆ ತಮ್ಮ ಬಂಧನವೇ ಸೂಕ್ತ ಸಾಕ್ಷಿ ಎಂದು ಹೇಳಿದ್ದಾರೆ.

Advertisement

ಕೇಂದ್ರ ಸರ‌ಕಾರವು ತನ್ನ ಅತೀದೊಡ್ಡ ರಾಜಕೀಯ ಎದುರಾಳಿಯನ್ನು ಮಟ್ಟ ಹಾಕಲು ಇ.ಡಿ ಮತ್ತು ಪಿಎಂಎಲ್‌ಎ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡಿದೆ. ಚುನಾವಣ ಕಾಲಘಟ್ಟದಲ್ಲಿ ನನ್ನನ್ನು ಬಂಧಿಸುವ ಮೂಲಕ ದ್ವೇಷ ಸಾಧಿಸಿದೆ ಎಂದು ಕೇಜ್ರಿವಾಲ್‌ ಆರೋಪಿಸಿದ್ದಾರೆ.

ಕೇಜ್ರಿವಾಲ್‌ ವಿರುದ್ಧ ಬಿಜೆಪಿ ಟೀಕೆ: ಇದೇ ವೇಳೆ, ದಿಲ್ಲಿ ಸಿಎಂ ಕೇಜ್ರಿವಾಲ್‌ ಅವರಿಗೆ ಜನರ ಹಿತಾಸಕ್ತಿಗಿಂತಲೂ ಸ್ವಹಿತಾಸಕ್ತಿಯೇ ಹೆಚ್ಚಾಗಿದೆ ಎಂದು ದಿಲ್ಲಿ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಬಿಜೆಪಿ ಕೂಡ ಅವರನ್ನು ಕಟುವಾಗಿ ಟೀಕಿಸಿದೆ. ಜನರ ಹಣದಿಂದ ನಿರ್ಮಿಸಲಾದ ಬಂಗಲೆ ಹಾಗೂ ಅಧಿಕಾರಕ್ಕೆ ಕೇಜ್ರಿವಾಲ್‌ ಅಂಟಿಕೊಂಡಿದ್ದಾರೆ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next