Advertisement

ಮತಾಂತರ ನಿಷೇಧ ಕಾಯಿದೆ ಜಾರಿಗೆ ಮುತಾಲಿಕ್‌ ಆಗ್ರಹ

07:09 PM Nov 12, 2021 | Team Udayavani |

ಬೆಂಗಳೂರು: ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ವಿವಿಧ ಮಠಗಳ ಸ್ವಾಮೀಜಿಗಳು ಮತ್ತು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌  ಮುತಾಲಿಕ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

Advertisement

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು,  ಬ್ರಿಟಿಷರ ಕಾಲದಿಂದ ಆರಂಭವಾಗಿರುವ ಮತಾಂತರ ಈಗಲೂ ದೇಶಾದ್ಯಂತ ನಡೆಯುತ್ತಿದೆ. ಮತಾಂತರ ನಿಷೇಧ ಮಾಡಲಾಗುತ್ತದೆ ಎಂಬ ವಿಚಾರ ಗೊತ್ತಾದ ಬಳಿಕ ಪಾದ್ರಿಗಳು ಮುಖ್ಯಮಂತ್ರಿ  ಅವರನ್ನು ಭೇಟಿಯಾಗಿ ಒತ್ತಡ ಹೇರಿರುವುದು ಸರಿಯಲ್ಲ ಎಂದು ಸ್ವಾಮೀಜಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದರು.

ಬಿಟ್‌ಕಾಯಿನ್‌:

ಬಿಟ್‌ಕಾಯಿನ್‌ ವಿಚಾರ ಪ್ರಸ್ತಾವಿಸಿದ ಮುತಾಲಿಕ್‌, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಪರಸ್ಪರ ದೂಷಣೆಯಿಂದ ಸತ್ಯ ಹೊರಬರದು.  ಪ್ರಕರಣದಲ್ಲಿ ಯಾರಿದ್ದರೂ ಅವರನ್ನು ಹೊರಗೆಳೆಯಬೇಕು. ಯುವಶಕ್ತಿಯನ್ನು ಹಾಳು ಮಾಡುತ್ತಿರುವ ಡ್ರಗ್‌ ಮಾಫಿಯಾದಂತೆ ಈ ಪ್ರಕರಣವನ್ನು ಮುಚ್ಚಿಹಾಕಬಾರದು ಎಂದು  ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next