Advertisement

ಸಂಗೀತ ವಿದ್ವಾನ್ ಗುರುಸ್ವಾಮಿ ಕಲಿಕೇರಿಯವರಿಗೆ ಪುಟ್ಟರಾಜ ಸಮ್ಮಾನ ಪ್ರಶಸ್ತಿ ಪ್ರದಾನ

09:07 PM Mar 03, 2024 | Team Udayavani |

ಗಂಗಾವತಿ:ಗದುಗಿನ ವಿರೇಶ್ವರ ಪುಣ್ಯಾಶ್ರಮದ ಸೇವಾ ಕರ್ತರು,ಖ್ಯಾತ ಸಾಹಿತಿ,ಸಂಗೀತಗಾರರಾದ ಗುರುಸ್ವಾಮಿ ಕಲಿಕೇರಿ ಇವರಿಗೆ ಪ್ರತಿಷ್ಠಿತ 2024ನೇ ಸಾಲಿನ ಪುಟ್ಟರಾಜ ಗವಾಯಿ ಸಮ್ಮಾನ ಪ್ರಶಸ್ತಿ ಪ್ರಧಾನ ಮಾಡಲಾಯಿತು.ಪ್ರಶಸ್ತಿ ಫಲಕ ಮತ್ತು ಒಂದು ಲಕ್ಷ ರೂ.ನಗದು ನೀಡಿ ಗೌರವಿಸಲಾಯಿತು.

Advertisement

ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರಾದ ಗುರುಸ್ವಾಮಿ ಕಲಿಕೇರಿ ಮಾತನಾಡಿ, ಪುಟ್ಟರಾಜ ಗವಾಯಿಗಳ ಹೆಸರಿನ ಪ್ರಶಸ್ತಿ ನನಗೆ ಲಭಿಸಿದ್ದು ಪೂರ್ವ ಜನ್ಮದ ಪುಣ್ಯವಾಗಿದೆ.ಗುರುಗಳ ಸೇವೆಯಲ್ಲಿ ಸಂದ ಗೌರವ ಅಪೂರ್ವವಾದದ್ದು ಈ ಆಶೀರ್ವಾದವನ್ನು ಸಕಲ ಸಂಗೀತ ಕಲಾವಿದರು,ಪುಟ್ಟರಾಜ ಶಿಷ್ಯ ಬಳಗಕ್ಕೆ ಸಮರ್ಪಣೆ ಮಾಡುತ್ತೇನೆ. ಮಕ್ಕಳಿಗೆ ಉತ್ತಮ ಸಂಸ್ಕಾರ,ಶಿಕ್ಷಣ, ಸಂಗೀತ ಹಾಗೂ ಕಲೆ ಬಗ್ಗೆ ಆಸಕ್ತಿ ಮೂಡಿಸುವುದು ಅವಶ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ವಿರೇಶ್ವರ ಪುಣ್ಯಾಶ್ರಮದ ಪೂಜ್ಯ ಕಲ್ಲಯಜ್ಜನವರು, ಶಾಸಕ ಗಾಲಿ ಜನಾರ್ದನರೆಡ್ಡಿ,ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಶಿವರಾಂಗೌಡ,ಮಾಜಿ ಶಾಸಕ ಪರಣ್ಣ ಮುನವಳ್ಳಿ,ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಪುಟ್ಟರಾಜ ಪ್ರತಿಷ್ಠಾನದ ಅಧ್ಯಕ್ಷ ನ್ಯಾಯವಾದಿ ಮಹಾಬಳೇಶ್ ಹಾಸಿನಾಳ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next