Advertisement
ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಿ.ಬಾಲಕೃಷ್ಣನ್, ಮಾಜಿ ಸಿಎಫ್ಒ ಮೋಹನ್ದಾಸ್ ಪೈ ಸೇರಿದಂತೆ ಅನೇಕರು ಸೋಮವಾರ ಇನ್ಫಿ ಮೂರ್ತಿ ನಿಲುವನ್ನು ಬೆಂಬಲಿಸಿ ಮಾತನಾಡಿದ್ದಾರೆ. “ಅತ್ಯುತ್ತಮ, ನಿಷ್ಕಳಂಕ ಆಡಳಿತ ಹಾಗೂ ಮೌಲ್ಯಗಳಿಗೆ ಹೆಸರಾಗಿದ್ದ ಇನ್ಫೋಸಿಸ್ ಅನ್ನು ಪ್ರಸ್ತುತ ನಾಯಕತ್ವವು ಹಾಳು ಮಾಡುತ್ತಿದೆ’, ಎಂದು ಬಾಲಕೃಷ್ಣನ್ ಆರೋಪಿಸಿದರೆ, “ಮೂರ್ತಿ ಅವರು ಸರಿಯಾದ ಪ್ರಶ್ನೆಯನ್ನೇ ಎತ್ತಿದ್ದಾರೆ. ಈ ಕುರಿತು ಮಂಡಳಿಯು ಚರ್ಚಿಸಬೇಕು,’ ಎಂದು ಪೈ ಅಭಿಪ್ರಾಯಪಟ್ಟಿದ್ದಾರೆ.
Related Articles
Advertisement
ಭುಗಿಲೆದ್ದ ಭಿನ್ನಮತ?ಇನ್ಫೋಸಿಸ್ನ ಕೆಲವು ಸಹ ಸ್ಥಾಪಕರು ಮತ್ತು ಆಡಳಿತ ಮಂಡಳಿ ನಡುವಿನ ಭಿನ್ನಾಭಿಪ್ರಾಯ ಭಾನುವಾರದ ಸಭೆಯಲ್ಲಿ ಸ್ಫೋಟಗೊಂಡಿತ್ತು. ಸಿಒಒ ಯು.ಬಿ. ಪ್ರವೀಣ್ ರಾವ್ ಅವರ ವಾರ್ಷಿಕ ವೇತನವನ್ನು ಶೇ.35ರಷ್ಟು ಅಂದರೆ 12.5 ಕೋಟಿ ರು.ಗೆ ಏರಿಸಿರುವುದಕ್ಕೆ ಇನ್ಫಿ ಮೂರ್ತಿ ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. “ಕಂಪನಿಯು ಯಾವತ್ತೂ ನ್ಯಾಯಸಮ್ಮತ ಸಂಭಾವನೆಯನ್ನು ಪಾಲಿಸಿಕೊಂಡು ಬಂದಿದೆ. ಆದರೆ, ಇತ್ತೀಚೆಗಿನ ಬೆಳವಣಿಗೆಗಳು ಆ ಸಂಪ್ರದಾಯಕ್ಕೆ ವಿರುದ್ಧವಾಗಿವೆ. ರಾವ್ ವೇತನ ಹೆಚ್ಚಳವು ಕಂಪನಿಯೊಳಗಿನ ಭಿನ್ನಮತವನ್ನು ಹೆಚ್ಚಿಸಲಿದೆ,’ ಎಂದಿದ್ದರು ಮೂರ್ತಿ. ಅಲ್ಲದೆ, ಸಿಒಒ ವೇತನ ಹೆಚ್ಚಳದ ನಿರ್ಣಯದ ಪರ ಮತ ಹಾಕುವ ಸಂದರ್ಭದಲ್ಲಿ ಇನ್ಫಿ ಮೂರ್ತಿ ಸೇರಿದಂತೆ ಕಂಪನಿಯ ಹಲವು ಪ್ರವರ್ತಕರು ದೂರವುಳಿದಿದ್ದರು. ಕಳೆದ ವರ್ಷ ಸಿಇಒ ವಿಶಾಲ್ ಸಿಕ್ಕಾ ವೇತನ ಹೆಚ್ಚಿಸಲು ಕಂಪನಿ ಮುಂದಾದಾಗಲೂ ಇದೇ ರೀತಿಯ ಅಭಿಪ್ರಾಯ, ಭಿನ್ನ ಧೋರಣೆ ವ್ಯಕ್ತವಾಗಿತ್ತು. ಇನ್ಫಿ ಷೇರು ಶೇ.1 ಕುಸಿತ:
ವೇತನ ಕುರಿತು ಇನ್ಫಿ ಮೂರ್ತಿ ಅವರು ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಇನ್ಫೋಸಿಸ್ ಕಂಪನಿಯ ಷೇರುಗಳು ಸೋಮವಾರ ಶೇ.1ರಷ್ಟು ಕುಸಿತ ದಾಖಲಿಸಿವೆ. ಮುಂಬೈ ಷೇರುಪೇಟೆಯಲ್ಲಿ ಇನ್ಫಿ ಷೇರುಗಳು ಶೇ.0.94ರಷ್ಟು ಕುಸಿದು, 1,011.25 ರೂ. ಆದರೆ, ನಿಫ್ಟಿಯಲ್ಲಿ ಶೇ.1.15 ಕುಸಿತ ದಾಖಲಿಸಿ, ಷೇರು ದರ 1,010.45ಕ್ಕೆ ತಲುಪಿದೆ.