Advertisement

ಅತ್ಯಾಚಾರಗೈದು ಕೊಲೆ: ಇಬ್ಬರ ಬಂಧನ

12:30 AM Feb 14, 2019 | |

ಮಡಿಕೇರಿ: ಎಮ್ಮೆಗುಂಡಿ ಎಸ್ಟೇಟ್‌ ಬಾಲಕಿಯ ನಾಪತ್ತೆ ಪ್ರಕರಣವನ್ನು ಭೇದಿಸಿರುವ ಕೊಡಗು ಪೊಲೀಸರು ಇಬ್ಬರರನ್ನು ಬಂಧಿಸಿ ದ್ದಾರೆ.  ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿ ಶವವನ್ನು ಬಂಡೆಕಲ್ಲಿನ ಬಳಿ ಅಡಗಿ ಸಿಟ್ಟಿದ್ದ ಪಶ್ಚಿಮಬಂಗಾಳ ಮೂಲದ ಕೂಲಿ ಕಾರ್ಮಿಕರಾದ ರಂಜಿತ್‌ ಹಾಗೂ ಸಂದೀಪ್‌ ಬಂಧಿತರು. 

Advertisement

ಕೊಡಗು ಜಿಲ್ಲೆಯ ಸಿದ್ದಾಪುರ  ಠಾಣಾ ವ್ಯಾಪ್ತಿಯ ಎಮ್ಮೆಗುಂಡಿ ಎಸ್ಟೇಟ್‌ನಿಂದ ಬಾಲಕಿ ಅಪಹರಣವಾಗಿದ್ದ ಬಗ್ಗೆ ಸಿದ್ದಾಪುರ  ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಜಿಲ್ಲಾ ಪೊಲೀಸರು ಸ್ಥಳೀಯ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಿದ್ದರು.

ಅಪಹರಣಕ್ಕೊಳಗಾದ ಬಾಲಕಿ ಯೊಂದಿಗೆ ಪಶ್ಚಿಮ ಬಂಗಾಳದ ರಂಜಿತ್‌ ಮತ್ತು ಆತನ ಸ್ನೇಹಿತನೊಂದಿಗೆ ಜಗಳವಾಡಿದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದರು. ಬಳಿಕ  ಸಮೀಪದ ಕರಡಿಕಾಡು ಎಸ್ಟೇಟ್‌ನಲ್ಲಿ ಕಾರ್ಮಿಕನಾಗಿದ್ದ ರಂಜಿತ್‌ನನ್ನು ವಶಕ್ಕೆ ಪಡೆದು  ವಿಚಾರಣೆಗೊಳಪಡಿಸಿದರು. 

ಅವಮಾನಿಸಿದ್ದು ಕಾರಣ 
ಈ ಸಂದರ್ಭ ಆತನು, ತಮ್ಮನ್ನು ಅವಮಾನಿಸಿದ್ದ ಬಾಲಕಿ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ   ಸಂದೀಪನೊಂದಿಗೆ ಸೇರಿ ಫೆ. 4ರಂದು  ಆಕೆಯನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿದ ವಿಷಯ ತಿಳಿಸಿದ.  ಅತ್ಯಾಚಾರದ ವಿಷಯವನ್ನು ಯಾರಿಗಾದರೂ ಹೇಳಿ ತಮಗೆ ತೊಂದರೆ ಯಾಗಬಹುದೆಂದು ಹಗ್ಗದಿಂದ ಆಕೆಯ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು  ಎಸ್‌ಪಿ ಡಾ| ಸುಮನ್‌ ಪನ್ನೇಕರ್‌ ಸುದ್ದಿಗೋಷ್ಠಿ ಯಲ್ಲಿ ಮಾಹಿತಿ ನೀಡಿದರು.

ಬಳಿಕ ಸಂದೀಪನನ್ನು ಕೂಡ ವಶಕ್ಕೆ ಪಡೆಯಲಾಗಿದ್ದು, ಆತನೂ ತಪ್ಪೊಪ್ಪಿ ಕೊಂಡಿದ್ದಾನೆ. ಎಮ್ಮೆಗುಂಡು ಎಸ್ಟೇಟಿನ ಗಣಪತಿ ದೇವಸ್ಥಾನದ ಕೆಳಭಾಗ ದ ಕಲ್ಲುಗುಡ್ಡದ ಬಂಡೆಯ ಬಳಿ ಮೃತ ದೇಹವನ್ನು ಬಚ್ಚಿಡಲಾಗಿತ್ತು. ಎಸ್‌ಪಿ  ನಿರ್ದೇಶನದಂತೆ ಡಿವೈ ಎಸ್‌ಪಿ  ಸುಂದರ್‌ರಾಜ್‌  ಮಾರ್ಗ ದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಇನ್‌ ಸ್ಪೆಕ್ಟರ್‌ ಎಂ.ಮಹೇಶ್‌, ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್‌ ಮಾದಪ್ಪ, ಸಿದ್ದಾಪುರ  ಎಸ್‌ಐ ದಯಾನಂದ್‌, ಸಿಬಂದಿ ವರ್ಗದ ಯೋಗೇಶ್‌ ಕುಮಾರ್‌, ವೆಂಕಟೇಶ್‌, ಅನಿಲ್‌, ವಸಂತ, ನಿರಂಜನ್‌, ಸಿಡಿಆರ್‌ ಸೆಲ್‌ನ ಎಂ.ಎ.ಗಿರೀಶ್‌, ಸಿ.ಕೆ.ರಾಜೇಶ್‌ ಮತ್ತು ಮಂಜುನಾಥ್‌, ಲವ ಕುಮಾರ್‌, ಪೃಥ್ವೀಶ, ಮಲ್ಲಪ್ಪ ಹಾಗೂ ಚಾಲಕರಾದ ಶಶಿಕುಮಾರ್‌, ಪೂವಯ್ಯ, ಮೋಹನ  ಅವರು ಕಾರ್ಯಾ ಚರಣೆ  ನಡೆಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next