Advertisement
ಭೂ ಸೇನೆಯ ನಿವೃತ್ತ ಹವಾಲ್ದಾರ್ ಸುಬ್ರಾಯ ಪ್ರಭು ತನ್ನ ಮನೆಯಲ್ಲಿ ಆಗಾಗ ಆಸ್ತಿ ವಿಷಯದಲ್ಲಿ ಕುಟುಂಬದವರೊಂದಿಗೆ ತಕರಾರು ಮಾಡುತ್ತಿದ್ದ ಎನ್ನಲಾಗಿದೆ. ತನಗೆ ಬರಬೇಕಾದ ಆಸ್ತಿಯಲ್ಲಿ ಹಂಚಿಕೆ ಮಾಡದ ಕಾರಣದಿಂದ ಶನಿವಾರ ರಾತ್ರಿ 7:30ಕ್ಕೆ ತನ್ನ ಮನೆಯ ಮಹಡಿಯ ಕೆಳಗಿರುವ ಸಹೋದರನ ಮನೆಗೆ ಅಗಮಿಸಿ ಸಹೋದರ ಅಮೀತ ಪ್ರಭು ಪತ್ನಿ ಮೇಧಾ ಪ್ರಭು ಮಗನಿಗೆ ಮನೆಯಲ್ಲಿ ಪಾಠ ಹೇಳಿಕೊಡುತ್ತಿದ್ದ ವೇಳೆ ಏಕಾಏಕಿ ತನ್ನ ಲೈಯನ್ಸ್ ಹೊಂದಿರುವ 12 ಬೋರ, ಡಬಲ ಬ್ಯಾರೆಲ್ ಬಂದೂಕಿನಿಂದ ಎರಡು ಬಾರಿ ಗುಂಡು ಹಾರಿಸಿದ್ದಾನೆ. ಅನುಜ ಅಮಿತ ಪ್ರಭು (8) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈತನ ತಾಯಿ ಮೇಧಾ ಅಮಿತ ಪ್ರಭು (33) ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಹಳದಿಪುರ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಮೃತ ದೇಹದ ಮರಣೋತ್ತರ ಪರೀಕ್ಷೇಯನ್ನು ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ನಡೆಸಲಾಗಿದೆ.
Related Articles
Advertisement
ಎಸ್ಪಿ ವಿನಾಯಕ ಪಾಟೀಲ, ಡಿವೈಎಸ್ಪಿ ಶಂಕರ ಮಾರಿಹಾಳ, ಸಿಪಿಐ ಬಿ. ಪ್ರಮೋದಕುಮಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ವಶಕ್ಕೆ ಪಡೆದ ಅಜಯ ಪ್ರಭುನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯದಲ್ಲಿ 15 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.