Advertisement

ಅನೈತಿಕ ಸಂಬಂಧಕ್ಕಾಗಿ ಸ್ನೇಹಿತನ ತಲೆ ಮೇಲೆ ಕಲ್ಲು ಹಾಕಿ ಹತ್ಯೆ

09:55 AM May 29, 2019 | Vishnu Das |

ಬೆಂಗಳೂರು: ಅನೈತಿಕ ಸಂಬಂಧಕ್ಕಾಗಿ ಸ್ನೇಹಿತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈದ ಘಟನೆ ಪಟ್ಟೇಗಾರ ಪಾಳ್ಯದಲ್ಲಿ ನಡೆದಿದೆ.

Advertisement

ರಾಬಿನ್‌ ಎಂಬ 35 ವರ್ಷದ ವ್ಯಕ್ತಿಯನ್ನು ತನ್ವೀರ್‌ ಖಾನ್‌ ಅಲಿಯಾಸ್‌ ಶಾರೂಖ್‌ ಎಂಬಾತ ಹತ್ಯೆಗೈದಿದ್ದಾನೆ.

ರಾಬಿನ್‌ ಪತ್ನಿಗೆ ಅನೈತಿಕ ಸಂಬಂಧ ಹೊಂದುವಂತೆ ತನ್ವೀರ್‌ ಒತ್ತಾಯಿಸುತ್ತಿದ್ದ,ಇದಕ್ಕೆ ರಾಬಿನ್‌ ಅಡ್ಡಿಯಾಗಿದ್ದ ಹಿನ್ನಲೆಯಲ್ಲಿ ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ.

ಇಬ್ಬರೂ ಜೊತೆಯಲ್ಲೇ ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆರೋಪಿ ತನ್ವೀರ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next