Advertisement

ಸುನಾಮಿ ಕಿಟ್ಟಿ, ಮೂವರು ಸಹಚರರ ಸೆರೆ

06:40 AM Mar 04, 2018 | Team Udayavani |

ಬೆಂಗಳೂರು: ಅಪಹರಣ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ ರಿಯಾಲಿಟಿ ಶೋ ವಿಜೇತ, ನಟ ಸುನಾಮಿ ಕಿಟ್ಟಿ ಸಹಿತ ನಾಲ್ವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಸುನಾಮಿ ಕಿಟ್ಟಿ, ಯೋಗೇಶ್‌, ಸಂತೋಷ್‌ ಹಾಗೂ ಅರ್ಜುನ್‌ ಅಲಿಯಾಸ್‌ ಮುತ್ತಪ್ಪ ಬಂಧಿತರು. ಫೆ.28ರಂದು ಕಿಟ್ಟಿ ತನ್ನ ಸ್ನೇಹಿತ ಸುನಿಲ್‌ ಪತ್ನಿ ದೀಪಾ ತೌಶಿತ್‌ ಎಂಬಾತನ ಜತೆ ಸ್ನೇಹಕ್ಕೂ ಮೀರಿದ ಸಂಬಂಧ ಇತ್ತು. ಆದರೆ ಕುಟೀರ ಪಾರ್ಕ್‌ ಲ್ಯಾಂಡ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ ಸಪ್ಲೆಯರ್‌ ಗಿರೀಶ್‌ ದೀಪಾ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ತಪ್ಪಾಗಿ ಭಾವಿಸಿದ ದುಷ್ಕರ್ಮಿಗಳು ಗಿರೀಶ್‌ನನ್ನು ಅಪಹರಿಸಿದ್ದರು. ಅನಂತರ ತೌಶಿತ್‌ನನ್ನು ಅಪಹರಿಸಿ ಹೊರಮಾವು ಬಳಿಯ ತೋಟದ ಮನೆಗೆ ಕರೆದೊಯ್ದು ಹಲ್ಲೆ ಹಾಗೂ ಪಿಸ್ತೂಲ್‌ನಿಂದ ಪ್ರಾಣ ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next