Advertisement

ಮೃತ್ಯುಕೂಪ ಮುಚ್ಚಿದ ಪುರಸಭೆ

11:03 AM Nov 30, 2018 | Team Udayavani |

ಸೇಡಂ: ಪಟ್ಟಣದ ವಿದ್ಯಾನಗರ ಮತ್ತು ವೆಂಕಟೇಶ ನಗರ ಬಡಾವಣೆಯಲ್ಲಿ ತೆರೆದ ಬಾವಿ ಮತ್ತು ಗುಂಡಿಗಳನ್ನು ಮುಚ್ಚಲು ಪುರಸಭೆ ಅಧಿಕಾರಿಗಳು ಮತ್ತು ಬಿಜೆಪಿ ಮುಖಂಡರು ಮುಂದಾಗಿದ್ದಾರೆ. ಈ ಕುರಿತು ನ. 25ರಂದು ಮೃತ್ಯುಕೂಪದಂತಿವೆ ತೆರೆದ ಗುಂಡಿಗಳು ತಲೆಬರಹದಡಿ “ಉದಯವಾಣಿ’ ವರದಿ ಪ್ರಕಟಿಸಿತ್ತು. ಅಂದೇ ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಕರೆ ಮಾಡಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.

Advertisement

ನಂತರ ಸ್ಥಳೀಯ ಮುಖಂಡ ವೆಂಕಟೇಶ ಪಾಟೀಲ, ರವಿ ಗೊಬ್ಬಿ ಮತ್ತು ಪುರಸಭೆ ಸಿಬ್ಬಂದಿ ಸೇರಿ ವೆಂಕಟೇಶ ನಗರದ ನಡುರಸ್ತೆಯಲ್ಲಿದ್ದ ಅಪಾಯಕಾರಿ ತೆರೆದ ಬಾವಿಗೆ ಸುರಕ್ಷತಾ ಕಲ್ಲುಗಳನ್ನು ಇರಿಸಿದ್ದಾರೆ. ಅಲ್ಲದೇ ಶೀಘ್ರವೇ ತೆರೆದ ಬಾವಿ ಮತ್ತು ತಗ್ಗುಗಳನ್ನು ಮುಚ್ಚಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next