Advertisement

Mundgod; ಬಿಸಿ ಸಾಂಬಾರ್ ಬಿದ್ದು ಅಡುಗೆ ಸಹಾಯಕಿಗೆ ಗಂಭೀರ ಗಾಯ

07:02 PM Aug 19, 2023 | Team Udayavani |

ಮುಂಡಗೋಡ: ಮೇ ಮೇಲೆ ಬಿಸಿ ಸಾಂಬಾರ ಬಿದ್ದು ಅಡುಗೆ ಸಹಾಯಕಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಶನಿವಾರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ನಡೆದಿದೆ.

Advertisement

ಅನ್ನಪೂರ್ಣ ಹುಳ್ಯಾಳ (49) ಅಡುಗೆ ಸಹಾಯಕಿಯಾಗಿದ್ದು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಅಡುಗೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಶನುವಾರ ಮಧ್ಯಾಹ್ನದ ಬಿಸಿ ಊಟ ತಯಾರಿ ಮಾಡಿದ್ದರು. ಅನ್ನಪೂರ್ಣ ಹಾಗೂ ಇನ್ನೊಬ್ಬ ಅಡುಗೆ ಸಹಾಯಕಿ ಪಾರ್ವತಿ ಸೇರಿ ಶಾಲೆಯಲ್ಲಿ ಬಿಸಿ ಸಾಂಬಾರ ಪಾತ್ರೆಯನ್ನು ಎತ್ತಿಕೊಂಡು ಬರುವ ಸಮಯದಲ್ಲಿ ಅನ್ನಪೂರ್ಣ ಕಾಲು ಜಾರಿ ಸಾಂಬಾರ ಪಾತ್ರೆ ಮೈಮೇಲೆ ಬಿದ್ದ ಪರಿಣಾಮ ದೇಹವು 50% ಭಾಗ ಸುಟ್ಟಿದೆ. ತಕ್ಷಣವೇ ಮುಂಡಗೋಡ ತಾಲೂಕಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next